Monday, February 21, 2011

Mahabharata re-creation process in Yakshagana


Even though Yakshagana emerged as a unique art form today, it has multiple existences in Karnataka. Doddata, Sannata, Moodalapaya and Paduvalapaya are its regional variations.  Moodalapaaya is performed in northern parts of Karnataka and Paduvalapaya is popular in coastal Karnataka which includes the districts of Dakshina Kannada, Udupi, Shimoga,  Chikkamagalur, Coorg and in the adjoining areas like Kasaragodu of Kerala State. The coastal Yakshagana again has two main variations called tenku tittu ( i.e. Southern style) and Badagu Tittu ( Northern style). Both styles have a night long stage performances with music, dance, costumes and dialogues. Talamaddale is another form, which has only spoken world.

Dr. Purushothama Bilimale, eminent Folklorist in his paper presented at the IGNCA Conference on Mahabharata during Jaya Festival in New Delhi explains the re-creation process of Mahabharata Katha in Yakshagana.
Bhima 

It is a not an easy task for a scholar to comprehend the Mahabharata re-creation process in Yakshagana due to its diversity and magnanimity. There are about thirty-six professional troupes performing more than 4000 Mahabharata centered Yakashaganas every year and also little more than 1500 amateur troupes annually performing an average of 1000 Mahabharata based episodes.  We could also listen to more than 1500 Talamaddale performances all over the year. Thus there will be around 6500 Mahabharatas are created every year in a remote and tiny place by the people. At an average of 300 audiences per performance, there are about 20, 00,000 people watch and enjoy Mahabharata in and around coastal Karnataka.
The Mahabharata  re-creation process has four important levels: 
First, there are Prasangas or episodes, which are texts written by various authors, during the early decades of 17th century. As listed below, there are about 170 independent episodes are currently available on Mahabharata.
Secondly there are musical texts, selected by the Bhagavata during performances, which are intricately produced lyric compositions based on these episodes in various meters set to different talas.
Thirdly there are verbal texts, which elevates the first text into a visual text via second text. A performance of verbal art is something more than words. It includes the artistry of voice and body. Hence crosses the linguistic level. During this phase, the actor is independent to use all of his resources like scriptures, plays, literature, society, politics, and practically everything. His makeup and dance styles visualize the Mahabharata story on a tiny stage. This creates an interesting pattern of Mahabharata, which is very unique to each performance. That is why people watch Mahabharata again and again.
And finally, the audience text, where various types of audience from different castes and classes creates or interpret their own Mahabharata narratives while watching performance on stage.
The relation between all these four levels are again multiple and complicate in nature.
Aesthetics of artistic stage performances:
Perhaps one of the greatest contributions of Mahabharata performance in Yakshagana can be their role in the development of aesthetics of artistic stage performances. Costumes and make-up constitute an important aspect of the visual non-verbal communication in Yakshagana Mahabharata. The audience will recognize distinctions within the costumes and makeup worn by various characters on the stage. This points to another level in which the colors work as a sign – they project different categories within the new world created on the stage.
One of the fundamental features of these costumes and make up are its symbolic nature of representation. The very nature of the theme that Yakshagana deals with – the epic world populated by gods, demons and super human characters-would preclude any possibility of realistic presentation. The various colors project different categories to which these characters belong. Dharmaraya, Karna and Arjuna will have same red colors with kingly headgears, where as Bhima and Dushyasana have gorgeous red-based colors, for their quick-tempered angry personality.  Young Abhinanyu has sharp red colors with fire symbol on his forehead, Duryodhana, will have heroic colors with demonic blue lines.   
Current trends:
One of the most obvious developments of Yakshagana Mahabharata in the last two decades has been a movement away from ritual towards entertainment. This process of de-ritualization with the decreasing religious appeal, the change in the context, theme and message change has been secularized Mahabharata. This change gets expressed in the way characters like, Karna and Dhuryodhan. These characters are no more wicked and evil but recognized as pratinayakas (anti hero). The learned artists through a process of reinterpretation radically altered the traditional meaning and emphasis is being laid on humanizing wicked characters. Thus Karna some time portrayed as the champion of downtrodden, Hidimba  speaks about the liberation of woman, and Dhuryodhana as a protector of ancestry.   The artists highlights their worthy qualities and even provides justification for their wicked deeds. As a result, instead of highlighting the religious message, which is the main theme of the written text, the emphasis in the performance text, falls on the tragic predicament of the protagonists.

Saturday, February 19, 2011

ಚಿತ್ರನೋಟ : ದೆಹಲಿಯಲ್ಲಿ ಡಾ. ರಹಮತ್ ತರೀಕೆರೆ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ. ರಹಮತ್ ತರೀಕೆರೆ ದೆಹಲಿಯಲ್ಲಿ
(Photo © Balakrishna Naik D)

ಡಾ. ತರೀಕೆರೆ ಮತ್ತು ಡಾ. ಪುರುಷೋತ್ತಮ ಬಿಳಿಮಲೆ
(Photo © Balakrishna Naik D)
ಡಾ. ಪುರುಷೋತ್ತಮ ಬಿಳಿಮಲೆ ತನ್ನ ಹತ್ತಿರದ ಗೆಳೆಯನ ಕುರಿತು ಬರೆಯುತ್ತಾ ಹೇಳುತ್ತಾರೆ:
"ಗೆಳೆಯ ರಹಮತ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದಿದೆ. ಅದಕ್ಕೆ ಸಂತೋಷ ಪಟ್ಟ ಅವನ ಸಾವಿರಾರು ಗೆಳೆಯರಲ್ಲಿ ನಾನು ಒಬ್ಬ. 
ರಹಮತ್ ನನ್ನು ಕಳೆದ ಸುಮಾರು 30 ವರ್ಷಗಳಿಂದ ನಾನು ಬಲ್ಲೆ. ಶಿವಮೊಗ್ಗದಲ್ಲಿ ಇದ್ದ ಅವನ ಮನೆಗೆ ಹೋಗಿದ್ದೆ, ಕನ್ನಡ ವಿವಿಗೆ ಆತ ಬರುವಂತಾಗಲು ಶ್ರಮಿಸಿದವರಲ್ಲಿ ನಾನು ಒಬ್ಬ. 
ಆತನ ಜೊತೆ ಕನ್ನಡ ವಿವಿಯಲ್ಲಿ ಕಳೆದ ಒಳ್ಳೆಯ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮಧ್ಯಾಹ್ನದ ಬುತ್ತಿ ಊಟದಿಂದ ಆರಂಭವಾಗಿ ಪ್ರತಿಭಟನೆಯ ಸೂಚನೆಯಾಗಿ ಕಾರಿಗೆ ಅಡ್ಡ ಮಲಗುವ ವರೆಗೆ ನಾವು ಜೊತೆಯಾಗಿದ್ದೆವು. ಉತ್ತರ ಕರ್ನಾಟಕದಾದ್ಯಂತ ನಾನು ಮತ್ತು ಆತ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ.
ಕಾರಣಾಂತರಗಳಿಂದ ಮುಂದೆ ನಾನು ದೆಹಲಿ ಸೇರಿದೆ. ಈ ಗೆಳೆಯ ಹಂಪಿಯಲ್ಲಿಯೇ ಉಳಿದು, ಕನ್ನಡದ ಮಣ್ಣಲ್ಲಿ ಆಳವಾಗಿ ತಳ ಊರಿ ಇದೀಗ ಎತ್ತರಕ್ಕೆ ಬೆಳೆದು ನಿಂತಿದ್ದಾನೆ." -ಡಾ. ಪುರುಷೋತ್ತಮ ಬಿಳಿಮಲೆ. 
 ತರೀಕೆರೆ ಮತ್ತು ಬಿಳಿಮಲೆ
(Photo © Balakrishna Naik D)

ಡಾ.  ರಹಮತ್ ತರೀಕೆರೆ
(Photo © Balakrishna Naik D)

ಡಾ. ರಹಮತ್ ತರೀಕೆರೆ
(Photo © Balakrishna Naik D)

ತರೀಕೆರೆ ಮತ್ತು ಬಿಳಿಮಲೆ
(Photo © Balakrishna Naik D)

ತರೀಕೆರೆ ಪತ್ನಿಯೊಂದಿಗೆ
(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)

(Photo © Balakrishna Naik D)



(Photo © Balakrishna Naik D)

(Photo © Balakrishna Naik D)

ಅಭಿಮತದಲ್ಲಿ ಕೆಂಪುಕೋಟೆ


Friday, February 18, 2011

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು!

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ  ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ  ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. ಅವನೀಂದ್ರನಾಥ್ ರಾವ್ ಅವರು ತರೀಕೆರೆಯವರ ಬೆನ್ನು ಬಿದ್ದರು. ಒಂದು ಆತ್ಮೀಯ ವಿಶೇಷ ಬರಹ ಕೆಂಪುಕೋಟೆಯ ಓದುಗರಿಗೆ. ಅಭಿನಂದನೆಗಳು ಮತ್ತೊಮ್ಮೆ ರಹಮತ್ ತರೀಕೆರೆ ಅವರೇ.

ಮೊನ್ನೆ ಈದ್ ಮಿಲಾದ್ ಹಬ್ಬದ ಶುಭ ಘಳಿಗೆಯಲ್ಲಿ ಮುಂಜಾನೆ ಎರಡು ಕನಸು ಕಂಡಿದ್ದೆ. 
ಒಂದು ಮಾಜಿ ರಾಷ್ಟ್ರಪತಿ,ಕವಿ, ತಂತ್ರಜ್ಞ, ಮಹಾನ್ ನಾಯಕ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತಾವಾದಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ಅವರ 'ಸಂವತ್ಸರ ಉಪಾನ್ಯಾಸ' ಆಲಿಸುವುದು. 
ಎರಡನೆಯದು  ಹಿಂದಿನ ದಿನ ಸಾಧ್ಯವಾಗದ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ, ಕನ್ನಡದ ಪ್ರಸಿದ್ಧ ಬರಹಗಾರ  ರಹಮತ್ ತರೀಕೆರೆ ಅವರನ್ನು ಕಂಡು ಮಾತನಾಡಿಸುವುದು.
ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಸಂಜೆಯ ಚಹಾ ಕೂಟದಲ್ಲಿ ತರೀಕೆರೆ ಅವರು ಕಾಣಿಸಲಿಲ್ಲ.
ಬಳಿಕ ಸಭಾಂಗಣದಲ್ಲಿ ಮೇಲೆ ವೇದಿಕೆಯ ಎಡ ಭಾಗದಲ್ಲಿ ಅವರನ್ನು ಕಂಡೆ. 
ದೇಶದ 24ಮಂದಿ ಪ್ರಶಸ್ತಿ ವಿಜೇತರನ್ನು  ಸ್ವಾಗತಿಸುತ್ತಾ  ಈಗಿನ  ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕನ್ನಡಿಗ ಅಗ್ರಹಾರ ಕೃಷ್ಣಮೂರ್ತಿ ಅವರು 'ನನ್ನ ಭಾಷೆಯ ,ಕನ್ನಡದ ರಹಮತ್ ತರೀಕೆರೆ ಈ ಬಾರಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು' ಎಂದಾಗ ಸಭಾಂಗಣ ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿತು.
ಮೊನ್ನೆ ಸಾಹಿತ್ಯ ಅಕಾಡೆಮಿಯು ' ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್' ನಲ್ಲಿ 'ಸಂವತ್ಸರ ಉಪಾನ್ಯಾಸ' ಏರ್ಪಡಿಸಿತ್ತು. 
ದೇಶದ ಶ್ರೇಷ್ಠ ಸಾಹಿತಿ ಅಥವಾ ಓರ್ವ ಚಿಂತಕರಿಂದ ಉಪಾನ್ಯಾಸವನ್ನು ಕೊಡಿಸುವುದು ಇದರ ಉದ್ದೇಶ. ರಹಮತ್ ತರೀಕೆರೆ ಅವರು ಖಂಡಿತವಾಗಿ ಅಲ್ಲಿಗೆ ಬರುತ್ತಾರೆ ಎಂಬ ನಂಬಿಕೆ ನನಗಿತ್ತು. ಆದರೆ ತರೀಕೆರೆ ಕಾಣಿಸಲಿಲ್ಲ. ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಎಲ್.ಹನುಮಂತಯ್ಯ ಅವರ ಭೇಟಿ ಆತ್ಮೀಯವಾಗಿತ್ತು.
ಅವರಿಬ್ಬರ ನಡುವೆ ಕುಳಿತು ಡಾ. ಕಲಾಮ್ ಅವರ ಉಪಾನ್ಯಾಸ ಕೇಳಿದೆ.
ಪಕ್ಕದಲ್ಲಿ ಒರಿಯಾದ ಶ್ರೇಷ್ಠ ಸಾಹಿತಿ ಸೀತಾಕಾಂತ ಮಹಾಪಾತ್ರ ಕುಳಿತಿದ್ದರು.  
ಸೂಜಿಗಲ್ಲಿನಂತೆ ಸೆಳೆದ,  ಮುಗ್ದ, ಆದರೆ ಪ್ರಖರ ಚಿಂತನೆಯ ಡಾ ಕಲಾಮ್ ಉಪಾನ್ಯಾಸ ಎಲ್ಲರನ್ನು ಮೈಮರೆಯುವಂತೆ ಮಾಡಿತು. ತಿರುವಳ್ಳುವರ್ ಅವರ 'ತಿರುಕ್ಕುರಲ್' ನನ್ನನ್ನು ಗಾಢವಾಗಿ ಪ್ರಭಾವಿಸಿದೆ ಎಂದು  ಡಾ. ಕಲಾಮ್ ನುಡಿದರು.ಪ್ರತಿಯೊಬ್ಬರೂ 'ಮನೆ ಗ್ರಂಥಾಲಯ' ಹೊಂದಲು ನೆರೆದವರನ್ನು ಅವರು ಪ್ರಮಾಣ ಮಾಡಿಸಿದರು.
ಡಾ. ಕಲಾಮ್ ಉಪಾನ್ಯಾಸ ಮುಗಿಸಿ ಹೊರಡುತ್ತಿದ್ದಂತೆ ಅಬಾಲ ವೃದ್ದರಾಗಿ ಜನರು ಅವರನ್ನು ಸ್ಪರ್ಶಿಸಲು ಮುಗಿಬೀಳುತ್ತಿದ್ದರು. 
ಹೊರಗೆ ಪತ್ನಿಯೊಡನೆ ತರೀಕೆರೆ ನಿಂತಿರುವುದನ್ನು ಕಂಡೆ.
ನನ್ನ ಊಹೆ ನಿಜವಾಗಿತ್ತು.ನನ್ನ ಪರಿಚಯ ಮಾಡಿಕೊಂಡೆ.'ಅವನೀಂದ್ರನಾಥ್ ನೀವು ಗ್ರಂಥಪಾಲಕರಲ್ಲವೆ,ನಿಮ್ಮ ಬಗೆಗೆ ತಿಳಿದಿದ್ದೇನೆ 'ಎಂದವರು ಹೇಳಿದಾಗ ನನಗೆ  ಅಚ್ಚರಿಯಾಯಿತು.
ರಹಮತ್ ತರೀಕೆರೆ ಅವರು ಅಕಾಡೆಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಾಯ ಅವರಿಂದ ಪ್ರಶಸ್ತಿ ಸ್ವೀಕರಿಸುವುದು
ನಿಮ್ಮ ಪ್ರಶಸ್ತಿವಿಜೇತ  'ಕತ್ತಿಯಂಚಿನ ದಾರಿ' ಕೃತಿಯ ಪ್ರಕಾಶಕ ನ.ರವಿ ಕುಮಾರ್ ನನಗೆ  ಗೊತ್ತು. ನನ್ನ ಮೊದಲ ಪುಸ್ತಕ 'ಸಮಯ ಸಂದರ್ಭ' ವನ್ನು ಅವರೇ ಪ್ರಕಟಿಸಿದ್ದರು ಎಂದು ಹೇಳಿದೆ. 
ಅದಾಗಲೇ ಡಾ. ಅಬ್ದುಲ್ ಕಲಾಮ್ ಅವರ ಉಪಾನ್ಯಾಸ ಮತ್ತು ಆಕರ್ಷಣೆಯಿಂದ ಹೊರ ಬಂದಿರದ ತರೀಕೆರೆ 'ಓರ್ವ ಮಾಜಿ ರಾಷ್ಟ್ರಪತಿ ಈ ಬಗೆಯಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ಸಂಗತಿ' ಎಂದು ಉದ್ಗರಿಸಿದರು.
ಬೆಳಿಗ್ಗೆ ಅಕಾಡೆಮಿ ಹಮ್ಮಿಕೊಂಡಿದ್ದ 'ರೈಟರ್ಸ್ ಮೀಟ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತರೀಕೆರೆ ಸಂಜೆ  ವಿಶ್ರಾಂತಿ ಪಡೆಯಲು ಬಯಸಿದ್ದರಂತೆ. 
ಪತ್ನಿಯ ಒತ್ತಾಯದ ಮೇರೆಗೆ ಕಲಾಮ್ ಉಪಾನ್ಯಾಸ ಕೇಳಲು ಬಂದಿದ್ದಾಗಿ ನನ್ನಲ್ಲಿ ಹೇಳಿದರು. 
ಹಾಗಿಲ್ಲದೆ ಹೋಗಿದ್ದರೆ ಈ ಅವಕಾಶ ತಪ್ಪಿಹೋಗುತ್ತಿತ್ತು ಎಂದು ತರೀಕೆರೆ ಪತ್ನಿಯ ಸ್ಪೂರ್ತಿಯನ್ನು ನೆನೆದರು. ನಂತರ 
ರಾತ್ರಿ 'ಪ್ರೆಸ್ ಕ್ಲಬ್'ನವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಲು ತರೀಕೆರೆ ಪತ್ನಿಯೊಡನೆ ಹೆಜ್ಜೆ ಹಾಕಿದರು.
ತರೀಕೆರೆ ಅವರಿಗೆ ಬೀಳ್ಕೊಟ್ಟ ಬಳಿಕ ಒಂದು ದೃಶ್ಯ ಮನದಲ್ಲಿ ಮರುಕಳಿಸುತಿತ್ತು. 
ಉಪಾನ್ಯಾಸದ ಬಳಿಕ ಯುವಕನೋರ್ವ 'ಭಾರತ 2020ರ ವೇಳೆಗೆ ಸೂಪರ್ ಪವರ್' ರಾಷ್ಟ್ರ ಆಗುವ ಬಗೆ ಹೇಗೆ ಎಂದು ಡಾ. ಕಲಾಮ್ ಅವರಿಗೆ ಸವಾಲು ಹಾಕಿದ್ದ. 
ಆಶಾವಾದಿಯಾದ ಡಾ. ಕಲಾಮ್ ನೆರೆದವರಿಗೆ ಪ್ರಮಾಣ ಮಾಡಲು ಹೇಳಿದರು.
ಅದು ಹೀಗಿತ್ತು.
'ಐ ಕ್ಯಾನ್ ಡು ಇಟ್ 
ಯು ಕ್ಯಾನ್ ಡು ಇಟ್
ಇಂಡಿಯಾ ಕ್ಯಾನ್ ಡು ಇಟ್ '
ಮುಂಜಾನೆ ಕಂಡಿದ್ದ ನನ್ನೆರಡೂ ಕನಸುಗಳು ಸಾಕಾರಗೊಂಡಿದ್ದವು. 

Thursday, February 17, 2011

ಸೂರಜ್ ಕುಂಡ್ ಮೇಳದಲ್ಲಿ ನಮ್ಮೂರಿನ ಹುಲಿವೇಷ ತಂಡ

ನೋಯ್ಡಾದ ಕನ್ನಡ ಯುವಕರು ಹರ್ಯಾನದ ಸೂರಜ್‍ಕುಂಡ್ ಮೇಳ ನೋಡಲು ಹೋಗಿ ಅಲ್ಲಿ ತಮ್ಮೂರಿನ ಹುಲಿ ವೇಷ ಕಂಡು ಅವರ ಜತೆ ಕುಣಿದದ್ದೇ ಕುಣಿದದ್ದು. ಮೆಲ್ ಕ ಮೀಯಾರ್ ಅವರು ಕೆಂಪುಕೋಟೆಯ ಓದುಗರಿಗೆ ಮೇಳದ ಚಿತ್ರಣವನ್ನು ನೀಡುತ್ತಿದ್ದಾರೆ.

ಭಾನುವಾರ ಅಂದ್ರೆ ಸುಮ್ನೆ ಮನೇಲಿ ಕೂತು ಕೊಳ್ಳೊಕ್ಕಾಗುತ್ತಾ? ಹೀಗಂತ ಯೋಚಿಸುವಾಗ ನಮಗೆ ಹೊಳೆದದ್ದು ಸೂರಜ್ ಕುಂಡ್ ಮೇಳ. ಇಷ್ಟಾದ ಮೇಲೆ ಹಿಂದೆ ಮುಂದೆ ನೋಡೋಕೆ ನಾವೇನು ಸಣ್ಣ ಮಕ್ಕಳೇನು? ಅಂದ ಹಾಗೆ ಹೊರಟಿತು ನೋಡಿ ಪ್ರಕಾಶ್ ಶೆಟ್ರು, ರಾಕೇಶ, ಮಂಜುನಾಥ ಮತ್ತು ನನ್ನ ಸವಾರಿ. ಕಳೆದ 13ರಂದು ಸೂರಜ್ ಕುಂಡ್ ಗೆ ತಲುಪುವಾಗ ಮಧ್ಯಾಹ್ನದ ಮೂರು ಗಂಟೆ. ಸಂಜೆ ಆರು ಗಂಟೆಗೆ ಮೇಳ ಮುಗಿಯುತ್ತದೆ. ಇದರ ನಡುವೆ ನಡುವೆ ಸಿಗುವ ಮೂರು ಗಂಟೆಯಲ್ಲಿ ನಾವು ನೋಡುವುದಾದರೂ ಏನು ಅಂತ ನಮ್ಮೊಳಗೆ ಯಾರೋ ಗೊಣಗಿದ. ಆದರೆ ಮೇಳದ ಆನಂದ ಸವಿಯಲು ಮೂರು ಗಂಟೆ ಸಾಲದು ಅಂತ ಹೇಳಿದವರಾರು? ಅದು ಸಹ ತೆಳ್ಳಗಿನ-ಬೆಳ್ಳಗಿನ ಲಲನೆಯರು ನಮ್ಮ ಹಿಂದೆ-ಮುಂದೆ ಸುಳಿದಾಡುವಾಗ!
ತುಘಲಕಬಾದ್ ಮೆಟ್ರೊ ನಿಲ್ದಾಣ ಇಳಿದು ಒಂದಷ್ಟು ಮುಂದೆ ಸಾಗುವಾಗಲೇ ಒಂದಷ್ಟು ಬಸವಳಿದಿದ್ದ ನಮ್ಮ ಮಂಜುನಾಥ ಆಗಲೇ ಎರಡು ಲೀಟರ್ ಗಾತ್ರದ ಒಂದು ಫ್ಯಾಂಟಾ ಬಾಟಲಿ ಮತ್ತು ಒಂದು 'ಲೇಸ್' ಪ್ಯಾಕೆಟ್ ತನ್ನ ಕೈಯಲ್ಲೆತ್ತಿ ಕೊಂಡ. ದೆಹಲಿ ಗಡಿಯನ್ನು ದಾಟುವಾಗ ನಮ್ಮ ಕಣ್ಣಿಗೆ ಬಿದ್ದದ್ದು ಸುರಾ ಅಂಗಡಿಗಳು. ಅದ್ಯಾರೋ `ಹರ್ಯಾಣದಲ್ಲಿ ಸುರಾ ಬೆಲೆ ದೆಹಲಿಗಿಂತಲೂ ಕಡಿಮೆಯಂತೆ' ಅಂತ ಹೇಳಿದ್ದು ನನಗೆ ನೆನಪಿಗೆ ಬಿತ್ತು. ಸರಿ, ಇದನ್ನೊಮ್ಮೆ ನೋಡಿಯೇ ಬಿಡಬೇಕು ಅಂತ ನಾನು ಈ ಅಂಗಡಿಯತ್ತ ಧಾವಿಸಿದೆ. ಅಂದ ಹಾಗೆ ವಿಷಯ ಹೌದು. ನನ್ನ ಬ್ರಾಂಡ್ ನ ಬಾಟಲಿಯಲ್ಲಿ ಒಟ್ಟು ಎಪ್ಪತ್ತು ರೂಪಾಯಿ ವ್ಯತ್ಯಾಸವಿತ್ತು.
ಇನ್ನು ಮೇಳದ ಬಳಿ ತಲುಪುತ್ತಿದ್ದಂತೆಯೇ ರಾಕೇಶನ ಬ್ಯಾಗಿನಲ್ಲಿದ್ದ ನಿಕೊನ್ ಡಿ-3000 ಕ್ಯಾಮರಾ ಹೊರಬಂದಿತ್ತು. ಶತ್ರು ಎದುರು ಬಂದಾಗ ಸೈನಿಕನು ತನ್ನ ಬಂದೂಕನ್ನು ಸಜ್ಜುಗೊಳಿಸುವಂತೆ ನಮ್ಮ ಶೆಟ್ರು ಕ್ಯಾಮರಾವನ್ನು ಸಜ್ಜುಗೊಳಿಸುತ್ತಿದ್ದರು. ಅಷ್ಟರಲ್ಲಿ ರಾಕೇಶನಿಗೆ ಇಲ್ಲಿನ ಸಂಸ್ಕೃತಿ, ಸೌಂದರ್ಯ, ಲಲನೆಯರ ನೋಟ- ಹೀಗೆ ಎಲ್ಲವನ್ನೂ ಸೆರೆಹಿಡಿಯುವ ತವಕ. ಆಗಲೇ ಶೆಟ್ರು ಒಂದು ಡೈಲಾಗ್ ಹೇಳಿಬಿಟ್ಟರು. ``ಇಲ್ಲಿ ನೋಡುವುದಕ್ಕೆ ಬಹಳಷ್ಟು ಇದೆ. ಈಗಲೇ ಫೋಟೊ ತೆಗೆಯಲು ಅವಸರ ಮಾಡಿದರೆ ಕ್ಯಾಮರಾದ ಮೆಮೊರಿ ಕಾರ್ಡ್ ನಲ್ಲಿ ಸ್ಥಳ ಸಾಕಾಗದು''.

ಸರಿ, ಶೆಟ್ರ ಸಲಹೆಗೆ ತಲೆ ಅಲ್ಲಾಡಿಸಿ ಮೇಳದ ಒಳಗೆ ಹೊಕ್ಕಿತು ನಮ್ಮ ಸವಾರಿ. ಇಲ್ಲಿ ಯಾವುದು ನೋಡುವುದು ಯಾವುದು ಬಿಡುವುದು ಹೇಳಿ? ಎಷ್ಟು ಸುತ್ತು ಹಾಕಿದರೂ ಮೇಳ ಮುಗಿಯದು. ಈ ಬಾರಿ ಮೇಳಕ್ಕೆ ಆರಿಸಿದ ರಾಜ್ಯ- ಆಂಧ್ರ ಪ್ರದೇಶ. ಎಲ್ಲಿ ನೋಡಿದರೂ ಆಂಧ್ರದವರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಲೇ ಇತ್ತು. ಒಂದು ಕಡೆ ನಾನು ಮತ್ತು ಶೆಟ್ರು ಆಂಧ್ರದವರ ತಾಳಕ್ಕೆ ಕುಣಿದದ್ದೂ ಬಂತು. ಇಷ್ಟರಲ್ಲಿ ನಮಗೊಂದು ಅಚ್ಚರಿ ಕಾದಿತ್ತು. ನವರಾತ್ರಿ ವೇಳೆ ನಮ್ಮ ಕುಡ್ಲದಲ್ಲಿ ಕಾಣಸಿಗುವ `ಪಿಲಿ ವೇಷ' (ಹುಲಿ ವೇಷ) ಇಲ್ಲಿ ಶಿವರಾತ್ರಿಗೆ ಮೊದಲೇ ಕಾಣಸಿಕ್ಕಿತ್ತು. ಐದಾರು ಹುಲಿಗಳು ವೇದಿಕೆ ಮೇಲೆ ಕುಣಿಯುತ್ತಲೇ ಇದ್ದವು. 'ಡಂಗ್ ಡಕ್ ರ್... ಡಂಗ್ ಡಕ್ ರ್...' ಅನ್ನೋ ಬಡಿತಕ್ಕೆ ನಮ್ಮ ಕಾಲು ಸಹ ನಲಿಯಲು ಆರಂಭಿಸಿತು. ಫೋಟೋ ತೆಗೆಯುವ ಜವಾಬ್ದಾರಿಯನ್ನು ರಾಕೇಶನಿಗೆ ವಹಿಸಿ ನಾನು ಮತ್ತು ಶೆಟ್ರು ಈ ಹುಲಿಗಳ ಜೊತೆ ಸೇರಿಕೊಂಡೇ ಬಿಟ್ಟೆವು. 'ಡಂಗ್ ಡಕ್ ರ್... ಡಂಗ್ ಡಕ್ ರ್...' ಅನ್ನುವಾಗ ಸ್ವಯಂಚಾಲಿತವಾಗಿ ನಮ್ಮ ಕಾಲು-ಕೈ ಎರಡೂ ನರ್ತಿಸಲು ಆರಂಭಿಸಿದವು. ಈ ಹುಲಿಗಳು ಚಕ್ರಾಸನದಲ್ಲಿ ನೆಲದ ಮೇಲಿಟ್ಟ ನೋಟುಗಳನ್ನು ಒಮ್ಮೆ ಬಾಯಿಯಿಂದ ತೆಗೆದರೆ, ಇನ್ನೊಮ್ಮೆ ಕಣ್ಣಿನ ರೆಪ್ಪೆಯಿಂದ ತೆಗೆದು ನೋಡುಗರಲ್ಲಿ ರೋಮಾಂಚನ ಮೂಡಿಸಿದವು. ಹುಲಿ ವೇಷಧಾರಿಗಳ ದೇಹದಲ್ಲಿ ಬರೆದ ಬರಹದಿಂದಾಗಿ ಇವರು ಕೇರಳದವರೆಂದು ನಮಗೆ ಸ್ಪಷ್ಟವಾಗಿತ್ತು. ಅಷ್ಟರಲ್ಲಿ ನಾವು ಸಹ ಇವರ ಜೊತೆ ಅರೆ-ಬರೆ ಮಲಯಾಳಂನಲ್ಲಿ ಮಾತನಾಡಲು ಆರಂಭಿಸಿದೆವು. ಆಗಲೇ ನಮಗೆ ಅಚ್ಚರಿ ಮೂಡಿದ್ದು. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ನಮ್ಮ ನೆರೆಯ ಕಾಸರಗೋಡು ಜಿಲ್ಲೆಯವರು. ಅಂದರೆ, ನಮ್ಮ ಗಡಿ ಜಿಲ್ಲೆಯವರು! ಮತ್ತೆ ಶುರುವಾಯಿತು ನೋಡಿ ತುಳು ಭಾಷೆಯಲ್ಲಿ ನಮ್ಮ ಮಾತುಕತೆ. `ಇರೆನ ಪುದರ್ ಎಂಚಿನ?' `ಇರೆನ ಊರು ಓಲ್?'- ಹೀಗೆ ನಮ್ಮ ಪ್ರಶ್ನೆಗಳ ಸುರಿಮಳೆ ಮುಂದುವರಿಯಿತು.
ನಮ್ಮ ಊರಿನ `ಪಿಲಿ'ಗಳೇ ದೊರಕಿದ್ದಾರೆ ಅಂತ ಈ ಪಿಲಿ ವೇಷಧಾರಿಗಳಿಗೂ ಭಾರೀ ಖುಶಿ. ಈ ಪಿಲಿ ವೇಷಧಾರಿಗಳ ನಾಯಕ ಮಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದವರು. (ಕ್ಷಮಿಸಿ, ಇವರ ಹೆಸರು ಕೇಳಲು ಮರೆತುಬಿಟ್ಟೆ) ಆ ಸಂದರ್ಭದಲ್ಲಿ ಅತ್ತಾವರದ ಮರಿನಂಜಪ್ಪ ಅವರ ಬಳಿ ಇವರು ತರಬೇತಿ ಪಡೆದರು. ನಂತರ ಕಾಸರಗೋಡಿಗೆ ಹೋಗಿ ತನ್ನದೇ ತಂಡ ಕಟ್ಟಿ ಅವರಿಗೆ ತರಬೇತಿ ನೀಡಿದವರು. ಇವರಲ್ಲಿ ಒಬ್ಬರು ವಿಟ್ಲ ಬಳಿಯ ಮಂಚಿಯವರು. ಇನ್ನೊಬ್ಬರು ಬಾಯಾರಿನವರು. ಹೀಗೆ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡುತ್ತಲೇ ಹೋದರು. ಕಳೆದ ಬಾರಿ ಅಕ್ಟೋಬರ್ ನಲ್ಲಿ ದೆಹಲಿಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ ನಡೆದ ಸಂದರ್ಭದಲ್ಲಿ ಇದೇ ಪಿಲಿಗಳನ್ನು ದೇಶದ ರಾಜಧಾನಿಗೆ ಕರೆಯಲಾಗಿತ್ತು. ಇಷ್ಟೆಲ್ಲಾ ಮಾತನಾಡುವಷ್ಟರಲ್ಲಿ ಇವರ ಅಭಿಮಾನಿಗಳ ದಂಡು ಇವರನ್ನು ಮುತ್ತಲು ಆರಂಭಿಸಿತು. ಮಹಿಳೆಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಇವರ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಹಾತೊರೆಯುತ್ತಿದ್ದರು. ಇಷ್ಟರಲ್ಲಿ ನಮ್ಮ ಮೊಬೈಲ್ ಫೋನ್ ನಲ್ಲಿ (ಕೈಗೆ ಗಡಿಯಾರ ಕಟ್ಟುವ ಕಾಲ ಎಂದೋ ಕಳೆದುಹೋಗಿದೆ) ಐದೂವರೆ ಹೊಡೆದಿತ್ತು. ಇನ್ನೊಂದೆಡೆ ಹೊಟ್ಟೆ ಚುರುಗುಟ್ಟಲು ಆರಂಭಿಸಿತು. ಮೇಳದ ಊಟ-ತಿಂಡಿ ಸ್ಟಾಲ್ ಗೆ ಹೋದರೆ ನಮಗೆ ರುಚಿಸುವ ಯಾವುದೇ ಆಹಾರ ಅಲ್ಲಿ ಲಭ್ಯವಿಲ್ಲ. ದಾರಿಯಲ್ಲಿ ನಡೆದು ಬರುವಾಗ ಮೇಳದ ಹೊರಗಡೆ ಮಾಂಸಾಹಾರಿ ಢಾಬಾ ಒಂದನ್ನು ನೋಡಿದ ನೆನಪು ನಮಗೆ ಬಂತು. ಇನ್ನೊಂದೆಡೆ ಭಾನುವಾರ ಬೇರೆ. ಸ್ವಲ್ಪ ಚಿಕನ್-ಮಟನ್ ತಿನ್ನದಿದ್ದರೆ ಹೇಗಾದೀತು? ಮತ್ತೆ ನಾವು ಹಿಂದೆ-ಮುಂದೆ ನೋಡಲಿಲ್ಲ. ನಮ್ಮ ಊರಿನ ಪಿಲಿಗಳಿಗೆ ಬಾಯ್ ಹೇಳಿ, ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ನಾವು ವಿರಮಿಸಿದ್ದು ಈ ಢಾಬಾದಲ್ಲಿಯೇ.
ಕೆಂಪುಕೋಟೆ


Wednesday, February 16, 2011

Mohair's Diary : Unlimited Dancing Abilities!!


I have witnessed a fabulous dance performance by physically disabled youngsters.
I couldn't believe my eyes about what I saw. There was a programme by Ability Unlimited Foundation,Delhi at Delhi Karnataka Sangha Auditorium on this weekend.
The programme started off with a Sufi Dance performance on wheelchairs.
I couldn't believe that something like Sufi dance can be done on wheel chairs.
The second performance was Purulia style Natya which was also performed on wheelchairs.
Third performance was Thillana which was also on wheels but some girls who were dancing along them were deaf and dumb,but still no one could make that out as they haven't missed a single beat of music which was unbelievable.
The fourth one was Talent Show which included dance on wheels as well as Bharatnatyam and it was about Devi Mahishasura Mardini.
The fifth one was Thantra which is the form of Marshal Arts of Manipur.
The childrens performing this act had real swords from which they fought.
The swords even sparked during the fights,which was unbelievably perdormed on wheelchairs.
It was just mesmerising and breath taking performance.
The sixth one was Yoga performed on wheels and they also showed Aasanas which sometimes a normal human can't do.
But they performed with such an ease that I just can't explain.
The seventh one was a dancing act on Geeta Updesha where a wheel chair was decorated as Ratha which was just unimaginable and Lord Krishna gave Arjuna updesha on right deeds and wrong deeds and its result.
Till I saw this,  it was unimaginable for me that a wheelchair is representing a Ratha.
The last performance was on the famous track by A. R. Rehman, Maa Tujhe Salam........and you won't beleive at the end the whole audience gave the participants a standing ovation which was first time.
For me, it was one of the best programmes ever I have seen.

Mohair Shetty Kodavoor  

Monday, February 14, 2011

ಪ್ರೀತಿಗೆ ಕಣ್ಣು ಬೇಡ ಒಂದಿಷ್ಟು ಮಣ್ಣಾದರೂ ಬೇಡವೇ?

ರಾಕೇಶ್ ಎನ್.ಎಸ್. ಅವರು ಪ್ರೇಮದ ಅಮಲನ್ನು ಕೆಂಪುಕೋಟೆಯ ಓದುಗರೊಂದಿಗೆ ಹಂಚುತ್ತಿದ್ದಾರೆ. ವ್ಯಾಲೆಂಟೇನ್ಸ್ ದಿನದ ಶುಭಾಶಯಗಳು!!




ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ.....! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು. ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ.... ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!
                                           ***
ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್‌ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ! ಕೊಳಲು ವಾದಕನ ಉಸಿರು ಕೊಳಲಿಗೆ ತಾಕಿದರೆ ಸಾಕು ನನಗದು ಬರಿ ಕೊಳಲ ದನಿಯಾಗಿ ಉಳಿಯೋದಿಲ್ಲ, ಅದು ಮನಃಶಾಂತಿಯ ಕೊಳವಾಗಿ ಬಿಡುತ್ತದೆ. ತಬಲ.... ಇಲ್ಲದೆ ’ನನ್ನ’ ಹುಸೇನ್‌ಗೆ ಅಸ್ತಿತ್ವವೇ ಇಲ್ಲ! ವೇಣುಗಾನ ಸೋನೆಯಾಗಿ ಸುರಿಯುವಾಗ ತಬಲ ನನಗೆ ಗುಡುಗಿನಂತೆ ಭಯ ಹುಟ್ಟಿಸುತ್ತದೆ. ಆದರೂ ನಾ ಹುಸೇನ್‌ನನ್ನು ಪ್ರೀತಿಸುವುದನ್ನು ಬಿಟ್ಟಿಲ್ಲ!
ಈಗ ಆಯ್ಕೆ ಪ್ರೀತಿಯದ್ದು. ನನ್ನ ಪ್ರೀತಿ ಯಾರ ಕಡೆಗೆ? ಯಾವುದು ನೈಜ ಪ್ರೀತಿ? ಅಷ್ಟರಲ್ಲಿ ಆಕೆಯ ಮಿಸ್‌ಡ್ ಕಾಲ್! ಕೊಳಲು ಬೇಡ! ಹುಸೇನ್‌ನ್ನು ಬೇಡ!
                                           ***
ಅವಳದ್ದು ಕಲ್ಲು ಹೃದಯ, ಅವಳೂ ಹಾಗೆ ಹೇಳಿಕೊಳ್ಳುತ್ತಿದ್ದಳು, ಅವಳಿಗಾಗಿ ಹಪಹಪಿಸಿದವರೂ ಕೂಡ! ಒಂದು ದಿನ ’ಪರಾರಿ’ ಸುದ್ದಿಯಡಿಯಲ್ಲಿ ಅವಳ ಹೆಸರು! ಅವನ್ಯಾರೋ ಚಿರಪರಿಚಿತ ಟಪೋರಿ! ಅದು ಕಲ್ಲು ಕರಗುವ ಸಮಯ! ’ಪ್ರೀತಿಗೆ ಕಣ್ಣಿಲ್ಲ’ ಎನ್ನುವವರಿಗೆ ಸಿಕ್ಕ ಉದಾಹರಣೆ. ಪ್ರೀತಿಗೆ ಕಣ್ಣು ಬೇಡ ಬಿಡಿ, ಕೊನೆಗೊಂದಿಷ್ಟು ಮಣ್ಣಾದರೂ ಬೇಡವೇ? ಇದು ಅವಳ ತಂದೆ ತಾಯಿಯ ಅಳಲು, ಕೊನೆಗೊಂದು ದಿನ ಅವಳದ್ದು ಕೂಡ!


                                           ***
ಪ್ರೀತಿಯಿಂದ ಬಿತ್ತಿದರೆ ಅಕ್ಕಿಯಿಂದ ಭತ್ತ ಬೆಳೆಯಬಹುದು, ಪ್ರೀತಿಯಿದ್ದರೆ ಗಾಳಿಯನ್ನು ಕೂಡ ಮುಷ್ಟಿಯಲ್ಲಿ ಹಿಡಿದು ತೋರಿಸಬಹುದು, ಒಣ ಮರಳಲ್ಲಿ ಆಳೆತ್ತರದ ಗೋಡೆ ಕಟ್ಟಬಹುದು, ಹೀಗೆ ಪ್ರೀತಿಯಿದ್ದಲ್ಲಿ ಎಲ್ಲ ಬಹುದುಗಳೇ! ಪ್ರೀತಿಯೆಂದರೆ
ಏನು? ನಾವು ಪ್ರೀತಿಗೆ ಬೀಳುವುದಾ? ಅಥವಾ ಪ್ರೀತಿ ನಮ್ಮನ್ನು ಎಬ್ಬಿಸುವುದಾ? ಪ್ರೀತಿಯಲ್ಲಿ ನೈತಿಕ ಮತ್ತು ಅನೈತಿಕ ಎಂಬ ವಿಧ ಇದೆಯಾ? ಅದು ವರ್ತನೆಯಲ್ಲಿ ಮಾತ್ರ ಅಲ್ವಾ?
ನಾ ಮುಗ್ದ ಮುಖವಿಟ್ಟುಕೊಂಡು, ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ಕೇಳುತ್ತಿದ್ದೇನೆ..... ಒಂದೋ ಉತ್ತರ ಕೊಡಿ. ಇಲ್ಲ, ಒಂದಿಷ್ಟು ಪ್ರೀತಿ......!

Sunday, February 13, 2011

MOHAIR'S DIARY: Happy Valentine's Day!

The most awaited season of love is here of youngsters THE VALENTINES DAY. 
This is actually a western festival which in today's century is celebrated by not only youngsters but also the people of all ages. 
Our film industry has also shown this in their cinemas like Dil To Pagal Hai, etc.
But have we ever thought that why we celebrate this day?
Or is it all about young generation celebration?
No this day is not barred for any generation,age,sex or culture. 
Valentines day is just about love and spreading of love all over. 
But we just have to understand about its definition. 
Love is not about sharing happiness and sorrows but its also about sacrifices done for each other. 
But its just that the young generation should understand and feel the essence and sweetness of this world's best feeling called as love. 
HAPPY VALENTINES DAY to all of you.

Mohair Shetty Kodavoor

ರಾಧೆಯ ಸ್ವಗತ

ವ್ಯಾಲೆಂಟೈನ್ಸ್ ದಿನದ ಪ್ರೇಮಿಗಳ ಹಬ್ಬಕ್ಕೆ ಮುನ್ನುಡಿಯಾಗಿ ಈ ದಿನ ಬೆಳಕಿನ ಪಾದ ಕವನ ಸಂಕಲನದಿಂದ ಎರಡು ಕವನಗಳು. ಕೆಂಪುಕೋಟೆಯಲ್ಲಿ  ಅತ್ಯಂತ ಪ್ರೇಮಮಯ ಬರಹಕ್ಕಾಗಿ  ವ್ಯಾಲೆಂಟೈನ್ಸ್ ದಿನಕ್ಕೆ ಕಾಯೋಣ. 












ರಾಧೆಯ ಸ್ವಗತ


ರಾಧೆ ನಾನು
ಕಾಯುತ್ತಿದ್ದೇನೆ
ಯಮುನೆಯ ದಂಡೆಯಲ್ಲಿ
ಕೃಷ್ಣ ಬರುವನೆಂದು


ಮುಸ್ಸಂಜೆಯ ಮಂಜಿಗೆ
ಬಿರಿದ ಮಲ್ಲಿಗೆಯಾಗಿ
ಕೊಳಲಿನ ಇಂಚರದ
ಸವಿಯ ಮೆಲ್ಲಲು


ಅವನ ನೆನಪು
ತುಂಬಿ ಕೊಂಡಿದೆ
ಬಿಗಿದುಕೊಂಡ
ನನ್ನೆದೆಯೊಳಗೆ


ಕಾದಿದ್ದೇನೆ ಅವನಿಗಾಗಿ
ಬೆಣ್ಣೆಯಂತೆ ಕರಗಲು
ಎಲ್ಲಿ ಅಡಗಿದ
ಕಳ್ಳ ಅವನು


ಬಾನಿನಲ್ಲಿ ಬೆಳ್ಳಿ ಚುಕ್ಕಿ
ಕಣ್ಣಿನಲ್ಲಿ ಕಾತರ
ಬಂದೇ ಬರುವನು
ಯಾಕೆ ಆತುರ


ಅಂದಾಗಲೇ ಬಂದನಿಲ್ಲಿ
ಕತ್ತಲೊಳಗಿಂದ
ಕನಸಿನ ಲೋಕದಿಂದ
ನನ್ನ ಶ್ಯಾಮ, ನನ್ನ ಕೃಷ್ಣ.


ಕಾಮ ರತಿ


ನನ್ನ ಬತ್ತಳಿಕೆಯಲ್ಲಿರುವುದು
ಹೂವಿನ ಬಾಣ
ನಾನು ಮನ್ಮಥ, ಕಾಮ
ನೀನು ರತಿ


ನಿನ್ನ ಗರ್ಭದೊಳಗೆ
ನನ್ನ ಹೂವಿನ ಮೊಗ್ಗು
ಅರಳಿ ಬಿರಿಯಲಿ
ಕಾಮರತಿಯ ಸುಖವನ್ನುಂಡು


ನನ್ನೆದೆಯೊಳಗಿರುವುದು
ನೀನೊಬ್ಬಳಿಗೇ ಕಾಯ್ದಿರಿಸಿದ
ಪ್ರೀತಿ, ಪ್ರೇಮ, ಮೋಹ
ಬಯಕೆ, ಕಾಮ


ಎಲ್ಲವನ್ನುಂಡು ತೇಗು ಬಾ
ನನ್ನ ರತಿ
ಬರಿದಾಗದಿರಲಿ ನನ್ನ
ಹೂಬಾಣದ ಬತ್ತಳಿಕೆ.

ಕೆಂಪುಕೋಟೆ

Saturday, February 12, 2011

ಪ್ರೇಮಿಗಳ ಹಬ್ಬಕ್ಕೊಂದು ಹಿಂದಿ ಜಾನಪದ ಪ್ರೇಮ ಕತೆ


ಹಿಂದಿಯ ಮೊದಲ ಕವಿ ಎಂದು ಗುರುತಿಸಿಕೊಂಡ ಚಂದ ಬರ್ದಾಯಿಯ ಕೃತಿ ಪೃಥ್ವಿರಾಜ್ ರಾಸೊ ಸುಮಾರು ಹತ್ತು ಸಾವಿರ ಛಂದಗಳ ಲಾವಣಿ ಕಾವ್ಯ. ಹನ್ನೆರಡನೇ ಶತಮಾನದಲ್ಲಿ ಚಂದ ಬರ್ದಾಯಿಯು ಪೃಥ್ವಿರಾಜ್ ಚೌಹಾಣನ ಆಸ್ಥಾನ ಕವಿಯಾಗಿದ್ದನು. ಪೃಥ್ವಿರಾಜ್ ರಾಸೋದ ಒಂದು ಭಾಗ ಮಹೋಬ ಖಾಂಡ. ಇದರಲ್ಲಿ ಮಧ್ಯಭಾರತವನ್ನು ಹತ್ತನೇ ಶತಮಾನದಿಂದ ಹನ್ನೆರಡನೇ ಶತಮಾನದ ವರೆಗೆ ಆಳಿದ ಚಂಡೇಲಾ ವಂಶದ ಸ್ಥಾಪಕ ರಾಜನ ಕಥೆಯನ್ನು ಒಂದು ಜಾನಪದ ಕಾವ್ಯವಾಗಿ ಹೇಳಲಾಗಿದೆ. ಒಂದು ದಂತಕತೆ ಎಂದೆನಿಸುವ ಚಂಡೇಲಾ ರಾಜವಂಶದ ಸ್ಥಾಪಕ ಚಂದ್ರವರ್ಮನ್‌ನ ಹುಟ್ಟಿನ ಕುರಿತಾದ ಕತೆಯು ತುಂಬಾ ರೋಚಕವಾಗಿದೆ. ಈಗಾಗಲೇ ಬಾನಾಡಿ ಬ್ಲಾಗ್ ನಲ್ಲಿ ಪ್ರಕಟಗೊಂಡ ಈ ಕತೆ ಪ್ರೇಮಿಗಳ ಹಬ್ಬದ ಸಂದರ್ಭದಲ್ಲಿ ಕೆಂಪುಕೋಟೆ ಓದುಗರಿಗೆ.

ಉತ್ತರಭಾರತವನ್ನು ಆಳುತ್ತಿದ್ದ ಗಹಿರಾವಾರ ವಂಶದ ರಾಜ ಇಂದ್ರಜಿತ್ ಗಹಿರಾವಾರನ ರಾಜಮನೆತನದ ಬ್ರಾಹ್ಮಣ ಪುರೋಹಿತ ಹೇಮರಾಜ. ಕಾಶೀ ಪಟ್ಟಣದಲ್ಲಿದ್ದ ಹೇಮರಾಜ ಅತ್ಯಂತ ಸ್ನೇಹಶೀಲನಾಗಿದ್ದ. ತನಗೆ ಮಗಳೊಬ್ಬಳು ಹುಟ್ಟಿದಾಗ ಅವಳಿಗೆ ಹೇಮಾವತಿ ಎಂದು ಹೆಸರಿಟ್ಟ. ಅವಳು ರೂಪದಲ್ಲಿ ಅತ್ಯಂತ ಸುರಸುಂದರಿಯಾಗಿದ್ದಳು. ಅಂತೆಯೇ ಗುಣದಲ್ಲಿಯೂ ಆಕೆ ಶೀಲ ಶೋಭಿತೆಯಾಗಿದ್ದಳು. ದುರ್ದೈವದಿಂದ ಅವಳಿಗೆ ಇಂದ್ರನ ಶಾಪವೆರಗಿತು. ಹದಿನಾರನೇ ವಯಸ್ಸಿಗೆ ಅವಳು ವಿಧವೆಯಾದಳು.
ಖಜುರಾಹೋ
ಅದೊಂದು ಗ್ರೀಷ್ಮ ಕಾಲದ ದಿನ. ಸೆಖೆಯಿಂದ ಬಸವಳಿದ ಹೇಮಾವತಿಯು ತಣ್ಣನೆಯ ನೀರಿನಲ್ಲಿ ಮೀಯಲೆಂದು ಹೊರಗೆ ಹೋದಳು. ಕುಮುದ ಪುಷ್ಪಗಳ ಸಖ ಚಂದ್ರದೇವ ಆಗಸದಲ್ಲಿ ಬೆಳಗುತ್ತಿದ್ದ. ಕೆಳಗೆ ಅತಿಲೋಕ ಸುಂದರಿಯಾದ ಹೇಮಾವತಿಯು ಸ್ವಚ್ಚಂದ ನೀರಿನಲ್ಲಿ ತನ್ನ ತನುವಿನ ಬೇಗೆಯನ್ನು ತಣಿಸುತ್ತಾ ಮೀಯುತ್ತಿದ್ದಳು. ನೀರಿನಿಂದ ತೋಯುತ್ತಿದ್ದ ಹದಿಹರೆಯದ ಅತಿ ಸುಂದರಿ ಹೆಣ್ಣೊಬ್ಬಳನ್ನು ಕಂಡ ಚಂದ್ರದೇವನ ಚಿತ್ತ ಚಂಚಲಗೊಂಡಿತು. ಭೂಮಿ ಮೇಲಿನ ಈ ನೋಟವನ್ನು ಕಂಡು ಆತ ಉಲ್ಲಸಿತನಾದ. ಚಂದ್ರದೇವ ಧರೆಗಿಳಿದು ಬಂದ. ಸುರ ಸುಂದರಿ ಹೇಮಾವತಿಯನ್ನು ಅಪ್ಪಿಕೊಂಡ. ಚಂದ್ರದೇವನು ಆ ರಾತ್ರಿಯಿಡೀ ಹೇಮಾವತಿಯೊಂದಿಗೆ ಕಳೆದ. ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡ ಹೇಮಾವತಿಗೆ ಆತ ಯಾರೆಂದು ಗೊತ್ತಿರಲಿಲ್ಲ. ತನ್ನ ಕೆಲಸ ಮುಗಿಸುತ್ತಲೇ ಚಂದ್ರದೇವನು ಸ್ವಸ್ಥಾನ ಸೇರಲು ಹೊರಡಲನುವಾದ. ಹೊರಗಿನ ಸೆಖೆಯ ಬೇಗೆಯನ್ನು ಕಳೆಯಲೆಂದು ಮೀಯಲು ಬಂದ ಹೇಮಾವತಿಯ ಒಳಗಿನ ದಾಹವು ತಣಿದಿತ್ತು. ಜತೆಗೆ ಕ್ಷಣವೊಂದರಲ್ಲಿ ನಡೆದ ಲೋಪದ ಅರಿವೂ ಉಂಟಾಯಿತು. ಚಂದ್ರದೇವನ ಹಿಂದೆ ಓಡುತ್ತಾ ಹೇಮಾವತಿಯು ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನನ್ನನ್ನು ಭೋಗಿಸಿ ಕಳಂಕಗೊಳಿಸಿದ ಏ ಪುರುಷನೇ ನಿನಗೆ ನನ್ನ ಶಾಪವಿದೆ ಎಂದು ಬೆದರಿಸಿದಳು.
ಖಜುರಾಹೋ
ಹೊರಡುತ್ತಿದ್ದ ಚಂದ್ರದೇವ ಹಿಂದೆ ತಿರುಗಿ ಎಲೇ ಮದನಾಂಗಿ, ನಮ್ಮ ಪಾಪಕ್ಕೆ ನೀನು ನನಗೆ ಶಾಪ ನೀಡಬೇಡ. ನಿನ್ನೊಡಲಲ್ಲಿ ಒಬ್ಬ ರಾಜನಾಗುವ ಪುತ್ರನನ್ನು ಪಡೆಯುವ ಸಂಭ್ರಮವನ್ನು ಅನುಭವಿಸು. ಆಚರಿಸು. ನಿನ್ನೊಡಲಲ್ಲಿ ಹುಟ್ಟುವ ಮಗು ರಾಜನಾಗುವನಲ್ಲದೇ ಅನೇಕ ದೇಶಗಳನ್ನು ಜಯಿಸಿ ಸಾವಿರ ದಿಕ್ಕುಗಳಲ್ಲಿ ತನ್ನ ಹೆಸರನ್ನು ಮೆರೆಸುತ್ತಾನೆ ಎಂದ. ಬುದ್ಧಿವಂತೆಯಾಗಿದ್ದ ಹೇಮಾವತಿ ಚಂದ್ರದೇವನಿಗೆ ಶಾಪ ಕೊಡುವ ವಿಚಾರವನ್ನು ಬಿಟ್ಟು ಬಿಟ್ಟಳು. ಆದರೆ ಸಮಾಜದಲ್ಲಿ ತಾನೊಬ್ಬ ಕಳಂಕಿತೆ ಎಂದು ದೂಷಣೆಗೆ ಒಳಗಾಗುವ ಭೀತಿಯಿಂದ ಕರುಬಿದಳು. ಏ ಚಂದ್ರದೇವ, ನೀನು ಏನೇ ಹೇಳಿದರೂ ನನ್ನ ಕಳಂಕವನ್ನು ಹೇಗೆ ತೊಳೆಯಲಿ? ನನ್ನ ಶರೀರದಲ್ಲಿ ಯೌವನ ತುಂಬಿ ತುಳುಕುತ್ತಿರುವುದು ನಿಜವಿರಬಹುದು. ಅದು ಸೌಂದರ್ಯದಿಂದ ಬಳುಕುತ್ತಿರುವುದು ನಿಜವಿರಬಹುದು. ಆದರೆ ಈ ದೇಹಕ್ಕೆ ದೊರೆಯಿಲ್ಲದ, ಗಂಡ ಸತ್ತ ವಿಧವೆ ನಾನು ಎಂದು ಚಂದ್ರದೇವನಲ್ಲಿ ಮೊರೆಯಿಟ್ಟಳು.
ಹದಿಹರೆಯದ ಮೊಹಕ ವಿಧವೆ ಹೇಮಾವತಿಯಲ್ಲಿ ಗರ್ಭಾಂಕುರಗೊಳಿಸಿದ ಚಂದ್ರದೇವ ಧೈರ್ಯದ ಮಾತುಗಳನ್ನಾಡಿದ. ಚೆಲುವೆಯೇ ಬೆದರಬೇಡ ನೀನು. ಕರ್ಣಾವತಿ ನದಿತೀರದಲ್ಲಿ ನಿನಗೊಬ್ಬ ವೀರ ಸುಕುಮಾರನು ಜನಿಸುವನು. ನಂತರ ನೀನು ಖಜ್ಜುಪುರಕ್ಕೆ ಹೋಗು. ಅಲ್ಲಿ ಅವನೊಂದಿಗೆ ದಾನಧರ್ಮ, ಯಜ್ಞಯಾಗಾದಿಗಳನ್ನು ನಡೆಸು. ಆ ವೀರಪುತ್ರನು ತನ್ನ ಚದುರಂಗ ಬಲದಿಂದ ಎಲ್ಲಾ ರಾಜರುಗಳನ್ನು ಸೋಲಿಸಿ ಮಹೋಬಾದ ರಾಜ್ಯಭಾರವನ್ನು ಮಾಡುವನು. ಕಬ್ಬಿಣವನ್ನು ಚಿನ್ನಗೊಳಿಸುವ ಪರಶುಮಣಿಯು ಅವನಿಗೆ ದೊರೆಯುವುದು. ಅವನು ಅನೇಕ ದೇವಾಲಯಗಳನ್ನು ಕಟ್ಟುವನು. ಸರೋವರ, ಕೆರೆಗಳನ್ನು ನಿರ್ಮಿಸುವನು. ಪವಿತ್ರವಾದ ಕಾಲಿಂಜರಿನಲ್ಲಿ ಒಂದು ಕೋಟೆಯನ್ನು ಕಟ್ಟಿಸುವನು ಎಂದು ಚಂದ್ರದೇವನು ಭವಿಷ್ಯವಾಣಿಯನ್ನು ನುಡಿದನು.
ಖಜುರಾಹೋ
ಹೇಮಾವತಿಗೆ ಚಂದ್ರದೇವನ ಈ ಮಾತುಗಳಿಂದ ಸಮಾಧಾನವಾಗುವುದಿಲ್ಲ. ತಾನು ಅಂಟಿಸಿಕೊಂಡ ಈ ಕಳಂಕದಿಂದ ನಾನು ನನ್ನ ಸಮಾಜದಿಂದ ದೂಷಣೆಗೆ ಒಳಗಾಗುವುದು ಮಾತ್ರವಲ್ಲ, ಈ ಪಾಪ ನನ್ನನ್ನು ಮುಂದಿನ ಜನ್ಮದಲ್ಲೂ ಕಾಡಬಹುದು. ನನಗೆ ಹುಟ್ಟಲಿರುವ ಮಗುವನ್ನೇನೋ ನೀನು ಭುವನಪುತ್ರನನ್ನಾಗಿಸುವೆ. ಆದರೆ ನಾನು ಅವಮಾನದ ನರಕಯಾತನೆಯಲ್ಲಿ ನರಳಬೇಕಲ್ಲವೇ ಎಂದು ಚಂದ್ರದೇವನಲ್ಲಿ ಗೋಳಿಡುತ್ತಾಳೆ.
ಆಗ ಚಂದ್ರದೇವನು ಅವಳಿಗೆ ಕೆಲವು ಪ್ರಾಯಶ್ಚಿತ ಕರ್ಮಕಾರ್ಯಗಳನ್ನು ತಿಳಿಸಿದ. ನಿನ್ನ ಉದರದಲ್ಲಿ ಜನಿಸುವ ಆ ವೀರಪುತ್ರನು ತನ್ನ ಷೋಡಸ ಪ್ರಾಯದಲ್ಲಿ ಭಾಂಡ್ಯಯಜ್ಞವನ್ನು ಮಾಡುತ್ತಾನೆ. ಆಗ ನಿನ್ನ ಎಲ್ಲಾ ಪಾತಕಗಳೂ ಹರಿದು ಹೋಗುತ್ತವೆ ಎಂದ. ಎಲೇ ಸುಮನೋಹರಿ ಸುಂದರಿ ಹೇಮಾವತಿ, ನೀನಿನ್ನು ಯಾವುದಕ್ಕೂ ಅಳುಕಬೇಕಾಗಿಲ್ಲ. ನಿನ್ನ ಪುತ್ರ ಉನ್ನತ ಗುಣಗಳ ಕ್ಷತ್ರಿಯ ರಾಜನಾಗಿ ಮೆರೆಯುತ್ತಾನೆ ಎಂದು ಹೇಳಿ ಚಂದ್ರದೇವನು ಅಲ್ಲಿಂದ ಮರೆಯಾಗುತ್ತಾನೆ.  ವಿಧವೆಯೊಬ್ಬಳು ಗರ್ಭವತಿಯಾಗಿ ಸಮಾಜದಲ್ಲಿ ಬದುಕುವುದು ಅಸಹಜ ಎಂದು ಅರಿತು ಹೇಮಾವತಿಯು ಕಾಲಿಂಜರಿಗೆ ಬರುತ್ತಾಳೆ. ತೀರ್ಥಸ್ನಾನ ಮಾಡುತ್ತಾ ನಾಲ್ಕು ತಿಂಗಳುಗಳನ್ನು ಅಲ್ಲಿಯೇ ಕಳೆಯುತ್ತಾಳೆ. ಕಾಲಿಂಜಾರಿನಿಂದ ಆಕೆ ಒಂದು ಗ್ರಾಮಕ್ಕೆ ಬರುತ್ತಾಳೆ. ಅಲ್ಲಿಯ ಗ್ರಾಮ ಮುಖ್ಯಸ್ಥನ ಮನೆಯಲ್ಲಿದ್ದು ತನ್ನ ಮಗುವಿಗೆ ಜನ್ಮ ನೀಡುತ್ತಾಳೆ.
ವೈಶಾಖಮಾಸದ ಏಕಾದಶಿಯ ಸೋಮವಾರದಂದು ಜನಿಸಿದ ಆ ಸುಂದರ ಮಗು ಇನ್ನೊಂದು ಚಂದ್ರನಂತೆ ಶೋಭಿಸುತ್ತಿತ್ತು. ಮಗುವಿಗೆ ಚಂದ್ರವರ್ಮನ್ ಎಂದು ಹೆಸರಿಡಲಾಯಿತು. ದೇವಲೋಕದಲ್ಲಿ ಸುರತಿಯರು ಮಂಗಳಗಾನ ಹಾಡಿದರು. ಚಂದ್ರದೇವನೂ ತನ್ನ ಪುತ್ರನನ್ನು ನೋಡಲು ಬಂದ. ಹೇಮಾವತಿಗೆ ಹುಟ್ಟಿದ ಮಗನ ಭವಿಷ್ಯವಾಣಿಯನ್ನು ಮತ್ತೊಮ್ಮೆ ಪಠಿಸಿದ. ತನ್ನ ಪುತ್ರನು ಸ್ಥಾಪಿಸುವ ರಾಜವಂಶವು ವರ್ಮನ್ ಎಂಬ ಉಪನಾಮವನ್ನು ಎಲ್ಲಿಯವರೆಗೆ ಉಳಿಸಿಕೊಳ್ಳುತ್ತಾರೊ ಅಲ್ಲಿಯವರೆಗೆ ಅವನ ರಾಜವಂಶವೇ ರಾಜ್ಯಭಾರಮಾಡುವುದು ಎಂದು ಚಂದ್ರದೇವನು ಮತ್ತೊಂದು ವರವನ್ನು ನೀಡಿದ. ಚಂದ್ರದೇವನು ಮಹೋತ್ಸವವನ್ನೇ ಆಚರಿಸಿದ. ಸುರಗುರು ಬೃಹಸ್ಪತಿಯೇ ಮಗುವಿನ ಜನ್ಮ ಕುಂಡಲಿಯನ್ನು ಬರೆದ.
ಚಂದ್ರವರ್ಮನ್ ಹದಿನಾರರ ಹರೆಯಕ್ಕೆ ಬರುವ ಮೊದಲೇ ಅನೇಕ ಶಕ್ತಿಶಾಲಿ ಹಾಗು ಧೈರ್ಯದ ಕಾರ್ಯಗಳನ್ನು ಮಾಡಿ ತೋರಿಸಿದ. ಹುಲಿಯನ್ನು ಸಣ್ಣ ಕಲ್ಲಿನ ತುಂಡಿನಿಂದಲೇ ಕೊಂದ. ಬಲಿಷ್ಟ ಸಿಂಹವನ್ನು ಸಣ್ಣ ಚೂರಿಯಿಂದ ಮಣಿಸಿದ. ತನ್ನ ಮಗನ ಅದ್ಭುತ ಸಾಧನೆಗಳನ್ನು ನೋಡಿ ಹೇಮಾವತಿ ಆನಂದ ತುಂದಿಲಿತಳಾಗಿ ಚಂದ್ರನ ಕುರಿತಾದ ಮಂತ್ರ ಪಠಣೆಗಳನ್ನು ಮಾಡಲು ಆರಂಭಿಸಿದಳು. ಹದಿನಾರರ ಪ್ರಾಯ ತುಂಬುತ್ತಲೇ ಚಂದ್ರದೇವನು ಚಂದ್ರವರ್ಮನ್‌ಗಾಗಿ ಪರಶುಮಣಿಯನ್ನು ತಂದುಕೊಟ್ಟ. ಚಂದ್ರವರ್ಮನ್‌ನನ್ನು ಈ ಮಾನವಲೋಕದ ರಾಜಾಧಿರಾಜ ನೀನು ಎಂದು ಹರಸಿದ. ಚಂದ್ರವರ್ಮನ್‌ನ ಪಟ್ಟಾಭಿಷೇಕಕ್ಕೆ ದೇವಲೋಕದ ದೇವತೆಗಳೆಲ್ಲಾ ಧರೆಗಿಳಿದು ಬಂದರು. ಬೃಹಸ್ಪತಿ, ಕುಬೇರಾದಿಯಾಗಿ ಎಲ್ಲ ದೇವಗಣಗಳು ಖಜ್ಜುಪುರಕ್ಕೆ ಬಂದರು.
ಐದು ಪ್ರಹಾರಗಳನ್ನೊಳಗೊಂಡ ಎರಡು ಜನಪದಗಳ ರಾಜನಾಗಿದ್ದ ಚಂದ್ರವರ್ಮನ್ ಮೂರು ಸಾವಿರ ಸೈನಿಕರೊಂದಿಗೆ ರಾಜ್ಯ ವಿಸ್ತರಣೆಗಾಗಿ ದಂಡಿಗೆ ಹೊರಟನು. ಈ ಚಂಡೇಲಾ ರಾಜನ ಸಾಧನೆಗಳನ್ನು ಕೇಳಿದ ಕಾಶಿಯ ಗಹಿರಾವಾರನು ತನ್ನ ರಾಜ್ಯವನ್ನು ಚಂದ್ರವರ್ಮನ್‌ಗೆ ಬಿಟ್ಟು ಕೊಟ್ಟು ಓಡಿ ಹೋದನು.
ಖಜುರಾಹೋ
ಚಂದ್ರವರ್ಮನ್ ಕಾಲಿಂಜಾರಿನಿಂದ ಪತ್ನಿ ಸಮೇತ ಖಜ್ಜುಪುರಕ್ಕೆ ಬಂದು ತನ್ನ ತಾಯಿ ಹೇಮಾವತಿಯ ಕಾಲ ಬಳಿ ಕುಳಿತ. ತಾಯಿಯು ತಾನು ಪಟ್ಟ ಬವಣೆಯನ್ನು ಮತ್ತು ಕಳಂಕಿತಗೊಂಡ ವಿಚಾರವನ್ನು ಮಗನಿಗೆ ವಿವರಿಸಿದಳು. ಚಂದ್ರದೇವನು ತಿಳಿಸಿದಂತೆ ಭಾಂಡ್ಯಯಜ್ಞವನ್ನು ನಡೆಸಲು ಕೇಳಿಕೊಂಡಳು. ಖಜ್ಜುಪುರದಲ್ಲಿ ಸುಂದರವಾದ ಕೆರೆ ಹಾಗೂ ತೋಟಗಳನ್ನು ನಿರ್ಮಿಸಿ ಅಲ್ಲಿ ಎಂಬತ್ತೈದು ದೇವಾಲಯಗಳನ್ನು ಕಟ್ಟಲು ಹೇಮಾವತಿಯು ತನ್ನ ಪುತ್ರ ಚಂದ್ರವರ್ಮನ್‌ನನ್ನು ಕೇಳಿಕೊಂಡಳು.
ವೀರಪುತ್ರ ಚಂದ್ರವರ್ಮನ್ ತನ್ನ ತಾಯಿಯ ಅಭಿಲಾಶೆಗಳನ್ನೆಲ್ಲಾ ಪೂರೈಸಲು ಯಜ್ಞವನ್ನು ಮಾಡಿದನು. ದೇವಾಲಯಗಳನ್ನು ನಿರ್ಮಿಸಲು ದೇವಲೋಕದಿಂದ ವಿಶ್ವಕರ್ಮನನ್ನೇ ಒಲಿಸಿ ತರಿಸಿದ. ವಿಶ್ವಕರ್ಮನು ನಾಲ್ಕೇ ಗಂಟೆಗಳಲ್ಲಿ ಎಂಬತ್ತೈದು ದೇವಾಲಯಗಳನ್ನು ನಿರ್ಮಿಸಿದ. ಯಜ್ಞಯಾಗಾದಿಗಳ ನಂತರ ಹೇಮಾವತಿಯ ಎಲ್ಲಾ ಪಾತಕಗಳು ಕಳೆದವು. ಪಾಪಮುಕ್ತೆಯಾದ ಹೇಮಾವತಿ ನೇರವಾಗಿ ಸ್ವರ್ಗಲೋಕವನ್ನು ಸೇರುವಳು. ಮಂಗಳ ಕಾರ್ಯಗಳೆಲ್ಲಾ ಮುಗಿದ ನಂತರ ಚಂದ್ರವರ್ಮನ್ ಮಹೋಬದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಲು ತೊಡಗುತ್ತಾನೆ.

Friday, February 11, 2011

Living Traditions of Mahabharata


A Symposium
on the
Living Traditions of Mahabharata
Indira Gandhi National Centre for the Arts, New Delhi
10-16th February 2011

Day 4
13th February 2011, Sunday

10.30 am: Plenary Talk II
Chair:
G.N. Devy:  Mahabharata and Cultural Responses   

11.30 am: Session Eight- Regional Dynamics of Mahabharata
Performance IV: Bheel Bharat (Gujarat)
Presenter and Discussant: Bhagwan Das Patel
Chair: G N Devy
·         Satya Chaitanya – Bheel Bharath: Two Women Who Run With the Wolves
·         Jitendra Shah – Nalvilas – Ek Samikshatmak Adhyan
·         Urmila Sharma – Mahabharat me Nari: Ek Vimarsh
Discussant: Pradip Bhattacharya

1.00 pm: Lunch
2.00 pm: Session Nine- Regional Dynamics of Mahabharata
                                                (South of Vindhyas)  
Chair: Alfred Hiltebeitel
Speakers:
·         H. S. Shivaprakash – Myth and History in Jaina Mahabharata of Pampa and Ranna (Karnataka)
·         T.S. Satyanath – The Kinnari Jogi version of the Mahabharata: Text, Context and Performance
·         S.N. Sridhar – If Shakespeare Wrote an Epic: Kumara Vyasa’s Bharata in Kannada
·         Bhakthavatsala Reddy – (Pattam Katha, Andhra Pradesh)

4.15 – 4.45 pm:  Round Table “Variants of Mahabharata”
Discussants: Paper Presenters of the day.
Chair: H S Shivaprakash

Day 5
14th February 2011, Monday

10.30 am: Plenary Talk III
Chair: T S Rukmani
Alfred Hiltebeitel: Aravan- Kuttantavar, from Kuvakkam to Coimbatore

11.30 am: Session Ten- Plural Interpretations: Mahabharata in Ritual and Performance in the South
Performance V: Mahabharata in the Kudiyattam Sanskrit Theatre Tradition
Presenter and Discussant: G. Venu
Chair: Sudhakar Reddy
Speakers:
·         Raghavan Payyanad – Mahabharata tradition in Kathakali
·         Puroshothaman & Harendranath Avaroth – Narakasura-Satyabhama Fight in Harivamsha and a South Indian Performance Tradition
·         Purushotham Bilimale – Mahabharata Recreation Process in Yakshagana

1.00 pm: Lunch
2.00: Session Eleven- Mahabharata in the Medieval Period
Chair: T.S. Satyanath
Speakers:
·         S.K. Sen – Ashvamedhaparva of Jaimini and Vyasa-A Comparison
·         Mansura Haider – Mahabharata: A Symbol of Composite Culture during Medieval Period

4.00 – 5.00 pm: Round Table “Interpreting Mahabharata in Performance”
Chair: G Venu
Discussants: Paper presenters of the day.