Monday, January 31, 2011

25th Surajkund Crafts Mela 2011 - Feb 1-15


Surajkund becomes alive with the rhythm and beats of folk dances and riot of colors.
Uzbekistan is the Partner Country of 25th Surajkund Crafts Mela 2011.
It is one of the six independent Turkic states.
It is a doubly landlocked country in Central Asia, formerly part of the Soviet Union.
The magic of vibrant Andhra Pradesh is the theme state for this year Mela.
Surajkund is the annual fair that showcases the finest handlooms, handicrafts, authentic fragrances & flavours of rich Indian cuisines.
As winter turns briefly into spring, a caravan of more than 400 National and State awardee craftpersons from every corner of India wind their way to Surajkund.
The craftpersons from SAARC Nations are also participating in the Surajkund Crafts Mela.
At Surajkund Mela, the artisans' delicate hands create the most beautiful pieces which have fascinated many through ages!
25th Surajkund Crafts Mela offers a lot of Fun, Frolic,Entertainment and exclusive shopping.
In the rural ambience, more than 400 craftperson will display and Demonstrate their finest crafts work that is set to capture your hearts.
The authentic fragrances & flavours of rich Indian cuisines will kindle your taste buds.
Tap your feet with the beats of enthralling folk dancers from the various parts of the country.
A fair to cherish and remember..... forever.

HIGHLIGHTS
Best of Cultural programmes organized jointly by Ministry of Culture,ICCR,New Delhi, Theme State Andhra Pradesh and Cultural Affairs Department, Haryana & Haryana Kala Parishad.
Exporters Meet and Buyers Meet to be held at Surajkund Design Galleries with assistance of the DC Handlooms and DC Handicrafts.
Food Court with variety of Indian  & SAARC countries  Food.
Amusement Zone with playful rides and swings.
Folk Dances by Schools/Colleges at Chaupal daily from 11 a.m. onwards.
Surajkund lies 8 km from South Delhi. The resort is easily accessible by road.

Special conducted tours are available from Haryana Tourist Bureau at 36, Janpath, New Delhi
Buses are available from ISBT and Serai Kale Khan, Haryana Emporium, Baba Kharak Singh Marg


Sunday, January 30, 2011

ಸವಿ ಸವಿ ನೆನಪು ಸಾವಿರ ನೆನಪು...ದಿಲ್ಲಿಯ ನೆನಪು

ವೀರೇಶ್ ಹೊಗೆಸೊಪ್ಪಿನವರ

ಓದಿಗಾಗಿ, ವ್ಯಾಪಾರಕ್ಕಾಗಿ, ರಾಜಕಾರಣಕ್ಕಾಗಿ, ಉದ್ಯೋಗಕ್ಕಾಗಿ ನಾವು ಮತ್ತು ನಮ್ಮ ಕುಟುಂಬಗಳು ದಿಲ್ಲಿಗೆ ಬಂದಿದ್ದೇವೆ. 
ಹೀಗೆ ಬಂದವರು ಕೆಲವೊಮ್ಮೆ ಇಲ್ಲೇ ಬದುಕನ್ನು ಮುಂದುವರಿಸುತ್ತೇವೆ. ಕೆಲವರು ತಮ್ಮ ನಿವೃತ್ತಿಯ ನಂತರ ಹುಟ್ಟೂರಿಗೆ ಹೋಗುವ ಯೋಜನೆ ಹಾಕಿರುತ್ತೇವೆ. ಕೆಲವರು ಉದ್ಯೋಗ ಬದಲಿಸಿ ಅಥವಾ ಉದ್ಯೋಗದಲ್ಲಿ ವರ್ಗಾವಣೆಯ ಕಾರಣಕ್ಕಾಗಿ ದಿಲ್ಲಿ ಬಿಡುತ್ತೇವೆ. 
ಹೀಗೆಯೇ ಸುಮಾರು ನಾಲ್ಕು ವರ್ಷದ ಹಿಂದೆ ದಿಲ್ಲಿಗೆ ಕನ್ನಡ ಪತ್ರಿಕೆಯೊಂದರಲ್ಲಿ ಕೆಲಸ ಮಾಡಲು ಬಂದ ವಿನ್ಯಾಸಕಾರ ವೀರೇಶ್ ಹೊಗೆಸೊಪ್ಪಿನವರ ಅವರು ತವರೂರಿಗೆ ಹೊರಟಿದ್ದಾರೆ. 
ದಿಲ್ಲಿಯಲ್ಲಿ ಅವರ ಅನುಭವಗಳು ಅಪಾರ. ಕೆಂಪುಕೋಟೆಯ ಈ ಅಂತರ್ಜಾಲ ತಾಣದ ಮೂಲಕ ಅವರು ತಮ್ಮ  ಅನುಭವಗಳನ್ನು ಕನ್ನಡ ಓದುಗರಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಕ್ಷಣ ಓದಿಸಿಕೊಂಡು ಹೋಗುವ ಈ ಬರಹ ಈ ಭಾನುವಾರದ ವಿಶೇಷ ಓದಿಗಾಗಿ.

ಸವಿ ಸವಿ ನೆನಪು ಸಾವಿರ ನೆನಪು...ದಿಲ್ಲಿಯ ನೆನಪು...
ನಮ್ಮ ಬಾಲಣ್ಣ ಕೆಂಪುಕೋಟೆ ಕಟ್ಟಿದ್ರು; ಲೇಖನಗಳೂ ಬರೋಕೆ ಶುರು ಆದ್ವು. ನಾನೂ ಏನಾದ್ರೂ ಬರೀಬೇಕು ಅಂತ ಅನ್ನಿಸ್ತಿತ್ತು. ಏನ್ ಬರೀಬೇಕು ಅಂತನಾ ತೋಚ್ತಾನೇ ಇರ್ಲಿಲ್ಲ... ಹೂಂ ಸರಿ ಏನೋ ಬರಿಯೋಣ ಅಂತ ಕೂತು ಬರೀತಿದಿನಿ...

ದಿಲ್ಲಿ ಎಷ್ಟು ಚಂದ ಅಂದ್ರೆ ಅದನ್ನ ಮರೆಯೋಕೆ ಆಗೋಲ್ಲ... ಜೀವನ ಎಲ್ಲಾ ಕಲಿಸುತ್ತೆ ಅಂತಾರಲ್ಲ ಹಾಗೆ ನಾನ್ ದಿಲ್ಲಿಗೆ ಬಂದು ಬಹಳಷ್ಟು ಕಲಿತಿದ್ದೀನಿ. ಇನ್ನೂ ಕಲಿಯೋದು ಬಹಳ ಇದೆ. 
ನಾನ್ ಮೊದಲಿಗೆ ದಿಲ್ಲಿಗೆ ಬರೋಕೂ ಮುಂಚೆ ತುಂಬಾ ಅಂಜಿಕೆ ಇತ್ತು. ಹೇಗಪ್ಪ ಬರೋದು? ಅಲ್ಲಿ ಭಾಷೆ ಬೇರೆ; ಜನ ಬೇರೆ ತರ ಇರ್ತಾರೆ. ಹೇಗಪ್ಪ ಹೊಂದಿಕೊಳ್ಳೊದು ಅಂತ. 
ಅದಕ್ಕೆ ಮೊದಲೇ ಅನಂತ ಮತ್ತೆ ರಘುನಂದನ್ ಹತ್ರ ಒಂಚೂರು ಮಾಹಿತಿ ತಗೊಂಡೇ ಬಂದೆ ನೋಡಿ. 
ಅಬ್ಬಬ್ಬ! ದಿಲ್ಲಿ ವಿಮಾನ ನಿಲ್ದಾಣ ಇಳಿತಿದ್ದಂಗೆ 37 ಡಿಗ್ರಿ ಉಷ್ಣಾಂಶ. ನಮ್ಮ ಬೆಂಗಳೂರಲ್ಲಿ ಇಷ್ಟೊಂದು ಸೆಕೆ ಇರ್ತಿರಲಿಲ್ಲ. ಬಂದೋನೇ ಸೀದಾ ನಮ್ ಹೊಸ ಆಫೀಸ್ಗೆ ಹೋಗಿ ರಿಪೋರ್ಟ್ ಮಾಡಿಕೊಂಡೆ. 
ಮೊದಲನೇ ದಿನ ಏನೋ ನಮ್ ಆಫೀಸ್ನೋರೇ ಕಾರಲ್ಲಿ ಗೆಸ್ಟ್ ಹೌಸ್ ಗೆ ಕಳಿಸಿದ್ರು. 
ಇನ್ನು ಮುಂದೆ ಬಸ್ಸು ಆಟೋದಲ್ಲಿ ಬರಬೇಕು. ಎಲ್ಲಿಂದ ಹೊರಡಬೇಕು ಎಲ್ಲಿ ಇಳಿಬೇಕು ಅಂತ ಆಫೀಸ್ನೋರೆ ಬರೆದುಕೊಟ್ರು. 
ಸಹವರ್ತಿಗಳು
ಮೊದಲನೇ  ದಿನ 30 ರೂಪಾಯಿ ಕೊಟ್ಟು ಆಟೋದಲ್ಲಿ ಹೋದೆ. ಸಂಜೆ ಬರೋವಾಗ ಗೊತ್ತಾಯ್ತು ಬಸ್ಸಲ್ಲಿ ಬಂದರೆ ಬರಿ 3 ರೂಪಾಯಿ ಅಂತ ಅಮೇಲೆಲ್ಲ ಬರಿ ಬಸ್ಸಲ್ಲೇ ಪಯಣ... 
ಗೆಸ್ಟ್ ಹೌಸ್ ಬಿಟ್ಟು ಒಂದು ಚಂದದ ಮನೆ ಹುಡುಕಿ ಅದಕ್ಕೆ ಸೇರಿಕೊಂಡದ್ದೂ ಆಯ್ತು ಮೊದಲ ದಿನ ಮಲಗೋಕೆ ಚಾಪೆ ಇಲ್ಲದಿದ್ದರೂ ಪೇಪರ್ ಹಾಸ್ಕೊಂಡು ಮಲಗಿದ್ವಿ... ಅವಾಗ ದಿಲ್ಲಿನಲ್ಲಿ ಇರ್ಬಹುದಪ್ಪ ಅಂತ ಅನ್ನಿಸ್ತು. ಅಲ್ಲಿಂದ ಶುರು ಆಯ್ತು ನನ್ ದಿಲ್ಲಿ ಜೀವನ... 
ದೆಲ್ಲಿಲಿ ಇದ್ದ ಮೂರು ಮುಕ್ಕಾಲು ವರ್ಷ ಎಷ್ಟೆಲ್ಲ ಎಂಜಾಯ್ ಮಾಡಿದ್ದು ಅಂದ್ರೆ ಅಬ್ಬ ಅದೆಲ್ಲ ಮರೆಯದೇ ಇರೋ ಅಂತದ್ದು... 
ಇಲ್ಲಿ ದಿಲ್ಲಿ ಜನರ ಬಾಯಲ್ಲಿ ನಮ್ಮ ಪ್ರಕಾಶ್ ಶೆಟ್ಟರು ‘ಪರಕಾಸ್’ ಆದದ್ದು, ನಮ್ಮ ರಾಘವ ಶರ್ಮ ‘ರಾಗಬ್ ಸರ್ಮ’, ಇನ್ನು ನನ್ನೇನ್ ಬಿಟ್ಟಿಲ್ಲ ವೀರೇಶ್ ಹೋಗಿ ‘ಬಿರೇಸ್’ ಆಗಿದ್ದು ಆಯ್ತು... ಒಟ್ನಲ್ಲಿ ಎಲ್ಲಾ ‘ಬ’ ಮಯ. ಇದರಲ್ಲಿ ಹಾಳಾಗದ ಹೆಸರು ಅಂದರೆ ನಮ್ಮ ನಾರಾಯಣಸ್ವಾಮಿ ಮತ್ತೆ ಸುನಿಲ್ ಕುಮಾರ್ ಮಾತ್ರ. 
ನಾವು ಇಲ್ಲಿಗೆ ಬಂದು ಎಲ್ಲದಕ್ಕೂ ಈ ಬರಗೆಟ್ಟೋರು ಅಂತಾರಲ್ಲ ಹಂಗೆ ಆದಂಗೆ ಆಗಿ ಬಿಟ್ಟಿದ್ವಿ ಅನ್ನಿಸಿಬಿಟ್ಟಿತ್ತು. 
ಎಲ್ಲಿ ಕನ್ನಡದವರು ಸಿಗ್ತಾರೋ ಅಲ್ಲೆಲ್ಲ ಖುಶಿಯಿಂದ ಮಾತಾಡಿ ಅವರ ಗೆಳೆತನ ಪಡ್ಕೊತಿದ್ವಿ. ಹಿಂಗೆ ನಮ್ಮ ಏರಿಯಾ ಸುತ್ತ ಯಾರು ಯಾರು ಕನ್ನಡದವರು ಇದಾರೋ ಅವರನೆಲ್ಲ ಪರಿಚಯ ಮಾಡಿಕೊಂಡು ಬಿಟ್ಟದ್ದು ಆಯ್ತು... 
ಇದಕ್ಕೆ ಬಳಸಿದ್ದು ಒಂದೇ ಫಾರ್ಮುಲಾ. ಏನಿಲ್ಲ; ರಸ್ತೆಲಿ ಹೋಗೋವಾಗ, ಇಲ್ಲ ಅಂಗಡಿಗೆ ಹೋದಾಗ ಜೋರಾಗಿ ಕನ್ನಡದಲ್ಲೇ ಮಾತಾಡೋದು- ಹಿಂಗೆ ನಮಗೆ ಜೂಸ್ ಅಂಗಡಿಲಿ ಸಚಿನ್ ಸಾಗರ್ ಪರಿಚಯ ಆದ್ರು, 
ವಿಶ್ವಾಸ್ ಮತ್ತೆ ರಾಥೋಡ್ ಪರಿಚಯ ಆದ್ರು, ನಮ್ ಮನೆ ಓಣಿನಲ್ಲೇ ಆಗಾಗ ಕನ್ನಡದ ಹಾಡು ಕೇಳ್ತಿತ್ತು... ಕೊನೆಗೂ ಅಲ್ಲಿ ಸಂತೋಶ್ ಪರಿಚಯ ಆದ್ರು. 
ಕುಡಿಕೆ ಚಹಾ ... ಅಹಾ..
ಹೀಗೇ ನಮ್ ಜೊತೆ ಕೃಷ್ಣನೂ ಬಂದ. ಮತ್ತೆ ಹಂಗೆ ಮೆಲ್ವಿನ್. ನಮ್ ಮನೆ ಕರ್ನಾಟಕದಿಂದ ಬರೋ ನಮ್ಮ ಗೆಳೆಯರಿಗೆ ಗೆಸ್ಟ್ ಹೌಸ್ ಆದಂಗೆ ಆಯ್ತು. 
ಅಬ್ಬ ಅಂತೂ ನಾವ್ ಕರ್ನಾಟಕದಲ್ಲೇ ಇದಿವೇನೋ ಅಂತನಾ ಅನ್ನಿಸ್ತಿತ್ತು.
ನಾವು ಪರದಾಡಿದ್ದು ಅಂದರೆ ಇಲ್ಲಿನ ಊಟಕ್ಕೆ ಬೆಂಗಳೂರಲ್ಲಿ ಬೀದಿಗೆ ಒಂದು ಹೋಟೆಲ್, ಸಂಜೆ ಆದ್ರೆ ಮಸಲಾ, ಪಾನಿಪುರಿ, ದಿನಾ ಮನೆಲಿ ಮಾಡಿದ ಊಟ ತಿಂದುಂಡ ನಮಗೆ ಮೊದಲಿಗೆ ಉತ್ತರ ಭಾರತದ ಊಟದ ರುಚಿಯೇ ಹಿಡಿಸಲಿಲ್ಲ. ಅದಕ್ಕೆ ಕನ್ನಡದವರ ಮನೆಗೆ ಊಟಕ್ಕೆ ಹೋಗೋದ್ರಲ್ಲಿ ನಮ್ಮದು ಎತ್ತಿದ ಕೈ. 
ಊಟದ ವಿಷಯ ಬಂದರೆ ನಮ್ಮ ಪ್ರೇಮಶೇಖರ ಮತ್ತೆ ವೀರಣ್ಣ ಮನೆ ಇನ್ನು ಅಲ್ಲಿ ಬಿಟ್ಟರೆ ಆಗಾಗ ಕರ್ನಾಟಕ ಫುಡ್ ಸೆಂಟರ್. ನಮ್ಮ ಆಫೀಸ್ ಹತ್ರ ನಮಗೆ ಹಿಡಿಸಿದ್ದ ಊಟ ಅಂದರೆ ಕರಣ್ ಹೋಟೆಲ್. ಇಲ್ಲೇ ನೋಡಿ ‘ದೋ ಮಿನಿಟ್ ಮೇ’ (ಇದು ದೆಲ್ಲಿಯ ಪೇಮಸ್ ಡೈಲಾಗ್) ಅನ್ನೋ ಡೈಲಾಗ್ ಪರಿಚಯ ಆದದ್ದು. ಜೊತೆಗೆ ಸಾಕೇತ್ನಲಿದ್ದ ‘ಓರಿಯಂಟರ್ ವಾಕ್’ ಚೈನೀಸ್ ಹೋಟೆಲ್.
ಸೆಖೆಗೆ ಹಾದಿಬದಿಯ ನೀರೇ ಗತಿ
ನಾವೆಲ್ಲ ಗೆಳೆಯರು ಸೇರಿ ಎಲ್ಲಾದ್ರೂ ಟ್ರಿಪ್ ಹೋಗ್ಬೇಕು ಅಂತ ಹರಿದ್ವಾರ, ಹೃಷಿಕೇಷ, ಮಸೂರಿ, ಆಗ್ರಾ, ಮಥುರಾ, ಕಜುರಾಹೋ, ನೈನಿಥಾಲ್, ಜೈಪುರ ಹೀಗೆ ಎಷ್ಟೋ ಕಡೆ ಸುತ್ತಾಡಿ, ಇಷ್ಟಲ್ಲದೇ ದೆಲ್ಲಿ ಎಲ್ಲಾ ಸುತ್ತಾಡಿದ್ದಾಯ್ತು. ಪ್ರತಿಯೊಂದು ಕಡೆನೂ ಒಂದೊಂದು ಹೊಸ ತರದ ಅನುಭವ ಉತ್ತರ ಭಾರತದ ಪ್ರವಾಸ ಮಾಡ್ತಿರೊ ಖುಶಿ.
ಆಹಾ ದಿಲ್ಲಿ ಸೆಕೆ ಬಗ್ಗೆ ಹೇಳಿರೋನು ಚಳಿ ಬಗ್ಗೆ ಬಿಡ್ತೀನಾ... 
ಅಬ್ಬ ಎಂಥ ಚಳಿ ಅಂದರೆ ಒಂದು ದಿನ 4ಗಂಟೆಗೆ ಎದ್ದು ಈ ಚಳಿನೂ ಬೇಡ, ಕೆಲಸನೂ ಬೇಡ ಬೆಳಿಗ್ಗೆ ಸೀದಾ ಊರಿಗೆ ಹೋಗ್ತೀನೀ ಅಂತ ಮೊದಲನೇ ಚಳಿಲೇ ಎದ್ದು ಕೂತಿದ್ದ ನನಗೆ ‘ಅಯ್ಯೋ ಸುಮ್ನಿರಪ್ಪ ಊರಿಗೆ ಹೋಗ್ತಾನಂತೆ ಮಲಕ್ಕೋಳೋ ಸಾಕು’ ಅಂತ ನಮ್ ಪ್ರಕಾಶ ಹೇಳಿ ಮಲಗಿಸಿದ್ರು. 

ಅದೇನ್ ಚಳಿಯಣ್ಣಾ ...
ಆ ಚಳಿಗೆ ಸ್ವೆಟರ್, ಜರ್ಕೀನ್ ಅದೂ ಇದು ತರೋಣ ಅಂತ ಟಿಬೇಟಿಯನ್ ಮಾರ್ಕೇಟ್ ಹೋಗಿ ವ್ಯವಹರಿಸಿದ್ದೇ, ಚೌಕಾಸಿ ಮಾಡಿದ್ದೆ... ಮೊದಲೇ ನಾವ್ ಎಲ್ಲೋದ್ರೂ ಕನ್ನಡದಲ್ಲೇ ಮಾತಾಡ್ತಿದ್ವಿ ಅಲ್ಲೂ ಸಹ ಹಂಗೇ ಮಾತಾಡ್ತಿದ್ದಂಗೆ ಅಲ್ಲಿ ವ್ಯಾಪಾರಸ್ತರು ಸಹ ಕನ್ನಡದಲ್ಲೇ ಮಾತಾಡೋದಾ ಅದೂ ಅಲ್ಲದೇ ಏನಣ್ಣ ಒಂದು ೨೦೦-೩೦೦ ರೂಪಾಯಿ ಕೊಟ್ಟು ಕೊಳ್ಳೊಕೆ ಇಷ್ಟೊಂದು ಚೌಕಾಸಿ ಅನ್ನೋದೆ. ಅಬ್ಬ ಅಲ್ಲೇ ತಬ್ಬಿಬ್ಬಾದ್ವಿ ಆಮೇಲೇ ಕನ್ನಡದಲ್ಲಿ ಮಾತಾಡೋವಾಗ ಸ್ವಲ್ಪ ಹುಶಾರಾಗಿ ಮಾತಾಡೋಕೆ ಶುರು ಮಾಡಿದ್ವಿ.        
ಇನ್ನು ದೆಹಲಿ ಕರ್ನಾಟಕ ಸಂಘಕ್ಕೆ ಬಂದ್ರಂತೂ ಎಲ್ಲೆಲ್ಲೂ ಕನ್ನಡಮಯ. ನಾವ್ ಮೊದಲಿಗೆ ಸಂಘಕ್ಕೆ ಬಂದಾಗ ಪುರುಷೋತ್ತಮ ಬಿಳಿಮಲೆಯವರು ಸಂಘದ ಅಧ್ಯಕ್ಷರಾಗಿದ್ರು... ‘ಯುವಕರು ನೀವು ನಿಮ್ಮಂತವರು ಬರಬೇಕು’ ಅಂತ ಮತ್ತೆ ಮತ್ತೆ ಹೇಳ್ತಿದ್ರು. 
ದೆಹಲಿ ಕರ್ನಾಟಕ ಸಂಘ ನಮಗೆ ಒಂತರಾ ಮನೆ ಇದ್ದಂಗೆ ಇತ್ತು.
ದೇಶದ ರಾಜಧಾನಿಯಲ್ಲಿ ದೋಸೆ ಸ್ವಾಮಿ!
ತಮ್ಮಂದಿರನ್ನ ಮಾತನಾಡಿಸೋ ತರ ಮಾತನಾಡಿಸ್ತಿದ್ದ ರೇಣುಕಾ ನಿಡುಗುಂದಿ, ಆತ್ಮೀಯತೆಯಿಂದ ಮಾತನಾಡಿಸ್ತಿದ್ದ ವಸಂತ ಶೆಟ್ಟಿ ಬೆಳ್ಳಾರೆ, ‘ಏ ಹುಡುಗ್ರಾ ನಮ್ ಅಭಿಮತಕ್ಕೆ ಏನಾದ್ರೂ ಬರೀರೋ’ ಅಂತ ಅವಾಗವಾಗ ಹೇಳ್ತಿದ್ದ ಉಷಾ ಭರತಾದ್ರಿ,
’ಗಣೇಶನ ಹಬ್ಬದಲ್ಲಿ ತಗೊಳ್ರೋ ಪಟಾಕಿ ಹಚ್ರಿ’ ಅಂತ ಕರೆದು ಗಣೇಶ ವಿಸರ್ಜನೆಗೆ ಕರ್ಕೊಂಡ ಹೋದ ಸಿ.ಎಂ. ನಾಗರಾಜು,
‘ಬರ್ರೋ ಸಂಘಕ್ಕೆ ತಿಂಗಳಿಗೆ ಒಂದು ಸಿನಿಮಾ ಹಾಕಿಸ್ತೀವಿ’ ಅಂತ ನಮ್ಮ ವೀರಣ್ಣ ಕಮ್ಮಾರ, 
ಸಂಘಕ್ಕೆ ಹೋಗ್ತಿದ್ದಂತೆ ಭೀಮನಂತೆ (ನಾಟಕದಲ್ಲಿ ಭೀಮನ ಪಾತ್ರಕ್ಕೆ ಸೂಕ್ತ) ಪ್ರತ್ಯಕ್ಷ ಆಗ್ತಿದ್ದ ಮೈಲಾರಪ್ಪ,
‘ಜನಕಪುರಿ ಕನ್ನಡ ಕೂಟದಿಂದ ಸತ್ಯನಾರಾಯಣ ಪೂಜೆ ಇದೆ ಬರ್ರಪ್ಪ’ ಅಂತಿದ್ದ ನಮ್ಮ ಪೊಲೀಸಣ್ಣ ಶ್ರೀನಾಥ್, 
‘ಅವು ಎಂಚ ಪಂಡ...’ ಅಂತ ಮಾತಾಡಿಸ್ತಿದ್ದ ಕೆ.ಎಸ್.ಜಿ. ಶೆಟ್ರು, 
ದೆ.ಕ.ಸಂ. ನಲ್ಲಿ
ಯಾವಾಗ್ಲೂ ಪ್ರೀತಿಯಿಂದ ಮಾತಾಡಿಸ್ತಿದ್ದ ಗುರುಗಳಾದ ಶಿವಾನಂದ ಇಂಗಳೇಶ್ವರ್, ನಮ್ ಸಂಗೀತದ ಮೇಷ್ಟು ರಮೇಶ್, (ನನ್ನ ಹೆಂಡತಿಗೆ ಹಾಡಲು ಅವಕಾಶ ಕೊಟ್ಟ ಸಂಘದ ಪದಾಧಿಕಾರಿಗಳು, ಮುಖ್ಯವಾಗಿ ರಮೇಶ್ ಅವರಿಗೆ ನನ್ನ ವಂದನೆಗಳು.)
‘ನೀವ್ ಬಿಡ್ರಿ ಮದುವೆಗೆ ಕರೆದ್ರೆ ಒಂದು ಊಟ ಜಾಸ್ತಿ ಖರ್ಚಾಗುತ್ತೆ ಅಂತ ನನ್ನ ಮದುವೆಗೆ ಕರೆದಿಲ್ವಾ’ ಅಂತ ಅಂದ ಶ್ರೀನಿವಾಸ ಮೂರ್ತಿ 
(ಅದಕ್ಕೆ ಯೋಚಿಸಿದ್ದೀನಿ ನಾ ಇನ್ನೊಂದು ಮದುವೆ ಆದ್ರೆ ಅವರೇ ಅಡುಗೆ ಮನೆ ಇಂಚಾರ್ಜ್ ಅಂತ), 
ಮೊದಮೊದಲಿಗೆ ವೇದಿಕೆ ಹಿಂದೆ ಕೇಳಿ ಬರ್ತಿದ್ದ ಆಕಾಶವಾಣಿ ದನಿಯ ಕೃಷ್ಣಭಟ್ಟರು, ಯಕ್ಷಗಾನದ ವಿದ್ಯಾ ಕೋಳ್ಯೂರು, ಯಾವಾಗ್ಲೂ ಬ್ರದರ್... ಬ್ರದರ್... ಅಂತಿದ್ದ ರೇಣುಕುಮಾರ್, 
ನಾವ್ ಕಾಲ್ಕಾಜಿ ಅಂಟಿ ಅಂಕಲ್ ಅಂತಿದ್ದ ಹರಿಶ್ಚಂದ್ರ ಬಂಟ್ವಾಳ್ ದಂಪತಿಗಳು, 
ನಾಟ್ಕ ....
ಯಾವಾಗ್ಲೂ ಮಾತಲ್ಲಿ ಹಾಸ್ಯಪ್ರಧಾನವೇ ಇರ್ತಿದ್ದ ಕೃಷ್ಣಮೂರ್ತಿ ಕಲುಮಂಗಿ ದಂಪತಿಗಳು,
ಕರ್ನಾಟಕ ಫುಡ್ ಸೆಂಟರ್ ಶರೀಫರು, ಕಲಾವಿದ ಸುಧೀರ್ ಫಡ್ನೀಸ್, 
ಇನ್ನು ನಮ್ಮ ಅಭಿಮತದದಲ್ಲಿ ಒಳ್ಳೊಳ್ಳೆ ರೇಖಾ ಚಿತ್ರ ಬಿಡಿಸುತ್ತಿದ್ದ ಚೆನ್ನು ಎಸ್. ಮಠದ, 
ಸಂಪಾದಕೀಯ ವಿಭಾಗದಲ್ಲಿ ಜೊತೆಯಲ್ಲಿದ್ದ ಬಾಲಕೃಷ್ಣ ನಾಯ್ಕ್, ಅವನೀಂದ್ರನಾಥ್ ರಾವ್, ಮಹಾಬಲೇಶ್ವರ ಭಟ್, ಸಂತೋಷ್ ಉಪಾಧ್ಯಾಯ, ಮುಖಪುಟ ವಿನ್ಯಾಸ ಮಾಡೋದಕ್ಕೆ ಪ್ರೇರಣೆ ನೀಡಿದ ಗುರು ಬಾಳಿಗ,
ಇನ್ನು ಗುರುಗಾಂವ್ ನಲ್ಲಿ ಏನಾದ್ರೂ ಕೇಳಬೇಕು ಅಂದರೆ ಮೊದಲು ನೆನಪಾಗ್ತಿದ್ದ ಸತೀಶ್, 
ಹೀಗೇ ಎಂ. ವಿ. ವೆಂಕಟೇಶ್, ಶ್ಯಾಮ್ ಸುಂದರ್, ಅಂಬರೀಷ್, ಪಿ.ಸಿ. ಶ್ರೀನಿವಾಸ್, ಬಿರಾದಾರ್, ಅಹಲ್ಯಾ ಚಿಂತಾಮಣಿ, ಬಿ.ಎಸ್. ಮೇಟಿ, ಸರೋಜ-ಮಾಧವ್ ದಂಪತಿಗಳು, ಹೀಗೇ ಇನ್ನೂ ಎಷ್ಟೊಂದು ಜನ ದೆಹಲಿ ಕರ್ನಾಟಕ ಸಂಘದ ನೆನಪಲ್ಲಿ ಹಾದು ಬರೋ ನೆನಪುಗಳು.
ಇನ್ನು ಅಲ್ಲಿನ ನಾಟಕಗಳು, ನಾಟಕದ ನಂತರದ ಊಟಗಳು, ಸಂಗೀತ ಕಾರ್ಯಕ್ರಮಗಳು, ಯಕ್ಷಗಾನಗಳು,
ಗಣೇಶನ ಹಬ್ಬದ ಮೋಜುಗಳು, ಸಿನಿಮಾ ಶೋಗಳು, ಸಂವಾದಗಳು, (ಈ ಗಳು-ಗಳು ಎಲ್ಲಾ ಪಂಚರಂಗಿ ಎಫೆಕ್ಟ್) ಒಂದೇ ಒಂದು ಸಲದ ಪಿಕ್ನಿಕ್. ಕ್ರೀಡಾ ಕೂಟಗಳು, 
ಜಟ್ಟಿ ಕಾಳಗ ...ಶೆಟ್ಟಿ ಕಾಳಗ??
ಇದೇ ಕ್ರೀಡಾಕೂಟದಲ್ಲಿ ಪತ್ರಕರ್ತರದೇ ತಂಡ ಅಂತ ನಮ್ಮ ರಾಘವನ ನೇತೃತ್ವದಲ್ಲಿ ವಿನಾಯಕ್ ಭಟ್ರು, ಶಿವಪ್ರಸಾದ್, ಪ್ರಶಾಂತ್ ನಾಥು, ಪ್ರದೀಪ, ಶ್ರೀನಿವಾಸ ಗೌಡ್ರು, ಮೆಲ್ವಿನ್, ಕೃಷ್ಣ, ಸುನಿಲ್, ವಿನಯ್, ನಮ್ ಸತೀಶ್ ಸರ್ ಹಿಂಗೆ ಟೀಮ್ ಕಟ್ಟಿ ಆಡಿದ್ದೂ ಮಜ ಇತ್ತು. 
ಈಗ ಮತ್ತೆ ಅದೇ ತರದ ಟೀಮ್ ಕಟ್ಟಿ ಮ್ಯಾಚ್ ಆಡೋದ್ರಲ್ಲಿ ನಮ್ಮ ರಾಘವ ಮುಂದಾಗಿದಾನೆ ಆದ್ರೆ ಅದಕ್ಕೆ ನಾ ಇರೋಲ್ವೇ...
ತುಂಬಾ ಖುಶಿ ಕೊಟ್ಟಿದ್ದು ಅಂದ್ರೆ ನಾವ್ ಬಂದ ಹೊಸದ್ರಲ್ಲಿ ನಡೆದ ಜಾನಪದ ಜಾತ್ರೆ ಹಬ್ಬ. 
ಆ ಮೂರು ದಿನಗಳಂತೂ ಕನ್ನಡದ ಹಬ್ಬವೇ ಆಗಿತ್ತು. ಹಂಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ನನ್ ಫೋಟೋ ತೆಗಿಬಾ’ ಅಂತ ಕರೆದ ನಮ್ ಗುರುಗಳು, ‘ನಿನ್ನ ಗಡ್ಡ ನೋಡಿದ್ರೆ ಈ ಪಾತ್ರಕ್ಕೆ ನೀನೂ ಸೂಕ್ತ ಆಗ್ತಿಯಾ’ ಅಂತ ಪಾರ್ಟು ಕೊಟ್ರು...
ಇನ್ನು ಡಿಕೆಎಸ್ ಅಂದ್ರೆ ನೆನಪಾಗೋದು ನಮ್ಮ ದೇವಯ್ಯ, ಶೇಖರ್, ಬಾಲಚಂದ್ರ ಮತ್ತು ರಾಘವೇಂದ್ರ ಇವರೆಲ್ಲ... 
ಇನ್ನೂ ಅತೀ ಹೆಚ್ಚು ಉತ್ಸಾಹದಿಂದ ನಡೆಯೋದು ದೆಹಲಿ ಕರ್ನಾಟಕ ಸಂಘದ ಚುನಾವಣೆ. ಆವಾಗಂತ್ಲೂ ಗೊತ್ತಿರೋರು, ಗೊತ್ತಿಲ್ದೋರು ಎಲ್ಲರೂ ಎಲ್ಲಿ ಕಂಡರೂ “ನಮಸ್ತೆ, ಹೇಗಿದಿರ? ಮನೆಕಡೆ ಚೆನ್ನಾಗಿದಾರ” ಅನ್ನೋದು ಹಾಸ್ಯಾಸ್ಪದವಾಗಿರುತ್ತಿತ್ತು.
ಕೆಲವು ದಿಲ್ಲಿಯ ಪವರ್ ಫುಲ್ ನೆನಪುಗಳು:
ಪ್ರೇಮಶೇಖರ್ ಮತ್ತು ವೀರಣ್ಣ ಮನೆ ಊಟ
‘ದೋ ಮಿನಿಟ್ ಮೇ...’ ಅನ್ನೋ ಡೈಲಾಗ್
ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ...ನೀವು ......ಅಲ್ಲ ನಾವು....
ಊಟಕ್ಕಾಗಿ ತಡಕಾಡಿದ್ದು...
ದೆಲ್ಲಿ ಮೆಟ್ರೊ
ಕಾಮನ್ ವೆಲ್ತ್ ಗೇಮ್ಸ್
ಓಸಿಯಾನ ಫಿಲ್ಮ್ ಫೆಸ್ಟ್
ಚೌಕಾಸಿಗೆ ಹೆಸರುವಾಸಿಯಾದ ಕನ್ನಾಟ್ ಪ್ಲೇಸ್
ನಮ್ಮ ಅಲಾಕನಂದ ಏರಿಯಾ
ಸೆಲೆಕ್ಟ್ ಸಿಟಿ ವಾಕ್
ದೆಲ್ಲಿಯ ‘ಸುಖ’ವಿಲ್ಲದ ಮನೆಗಳು
ದೆಹಲಿ ಪ್ಲೈ ಓವರ‍್ಸ್ 
‘ಗೊತ್ತಾಯ್ತಾ ತಿಳ್ಕೋಳಿ...’
ದಿಲ್ಲಿ ಬಿಟ್ಟು ನೋಯ್ಡಾ ಕಡೆ ಬರ್ತಿದ್ದಂಗೆ ಇಲ್ಲಿಯದೊಂತರ ಹೊಸ ಜೀವನ... 
ದಿಲ್ಲಿ ತರ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗದಿದ್ರೂ ಮನೆಲೇ ಎಲ್ಲಾ ಗೆಳೆಯರ ಜೊತೆ ಮೋಜು ಮಾಡಿದ್ದೋ ಮಾಡಿದ್ದು. 
ಹೀಗೇ ನನ್ನ ಕೆಲಸ, ನನ್ನ ಆಫೀಸು ಇದೆಲ್ಲ ಹೆಚ್ಚು ಖುಶಿ ಕೊಟ್ಟವು. 
ನೋಯ್ಡಾದಲ್ಲಿ ನಾವು ಅಂದರೆ ಪ್ರಕಾಶ್, ರಾಘವ್, ಸುನೀಲ್, ಸತೀಶ್ ಚಪ್ಪರಿಕೆ, ಪ್ರವೀಣ್ ಕುಮಾರ್, ಶಾಂತ, ಗಂಗೂ, ಹೇಮಂತ್, ಸತೀಶ್ ಗಾರು, ಸುಧೀರ್, ರಾಕೇಶ್, ವಾಟ್ಸ್ ಅಪ್ ಮ್ಯಾನ್ ಮಂಜುನಾಥ್... ಇದೆಲ್ಲ ನನ್ನ ಬ್ಯಾಚುಲರ್ ಲೈಫು.. 
‘ಗಜಿಬಿಜಿ ಕಿಜಿಬಿಜಿ ಕೊಪ್ಪೊಪ್ಪೋ...
ತರಕಾರಿ ... ಹಣ್ಣು ...ಖರೀದಿ
ಕಿರಿಕಿರಿ ಕಯ ಕಯ ಕೊಕ್ಕೊಕ್ಕೋ ಲೈಫು ಇಷ್ಟೇನೇ.. ತರರಂಪೋ.. ತರರಂಪೋ.. ಲೈಫು ಇಷ್ಟೇನೇ..’
ಇನ್ನು ನನ್ ಮ್ಯಾರೀಡ್ ಲೈಫು... 
ಮತ್ತದೇ ಹೊಸ ಮನೆಗಳು, ಮನೆ ಸಾಮಾನುಗಳು, ಪ್ರತಿವಾರ ಶಾಂಪಿಂಗ್ ಗಳು, ಮನೆಗೆ ಬರ್ತಾ ತರಕಾರಿ ಹಾಲು-ಮೊಸರುಗಳು, 
ಹೀಗೇ ಸಾಗ್ತು ಜೀವನ. 
ನನ್ನಾಕೆಗೆ ಇಲ್ಲಿ ವಾತಾವರಣ ಅಷ್ಟೊಂದು ಹಿಡಿಸದಿದ್ರೂ ಹೊಸ ಕಂಪ್ಯೂಟರ್, ಅದರಲ್ಲೇ ಟಿವಿ,
ಪಕ್ಕದ ಮನೆಯ ಅಭಿನಂದನ್-ಶ್ವೇತಾ, ಕೆಳಗಿನ ಮನೆ ತಲೆತಿನ್ನೋ ಆಂಟೀ, 
ಯಾವಾಗೂ ಬರದ ಮಳೆ ಥೋ... ಅಂತ ಸುರಿದ ಮಳೆ, 
ಆಗಾಗ ದೆಹಲಿ ಕರ್ನಾಟಕ ಸಂಘದ ಕಾರ್ಯಕ್ರಮ, 
ಫ್ರೆಂಡ್ಸ್ ಜೊತೆ ಟ್ರಿಪ್ಪು, ಕಾಮನ್ ವೆಲ್ತ್ ಗೇಮ್ಸ್ ಹೀಗೇ ಸುತ್ತಾಡ್ತಾ ಆಕೆಗೂ ನೋಯ್ಡಾ ಜೀವನ ಆಷ್ಟೇನೂ ಬೇಸರ ತರ್ಲಿಲ್ಲ. ಆಗಾಗ ನಮ್ಮ ಮಂಜು ಡೈಲಾಗ್ ‘ಗೊತ್ತಾಯ್ತಾ ತಿಳ್ಕೋಳಿ’ ಅನ್ನೋದನ್ನ ನಮ್ ರಾಕೇಶ ಪದೇ ಪದೇ ಹೇಳಿ ಪ್ರತಿದಿನ ಗೊತ್ತಾಯ್ತಾ ತಿಳ್ಕೋಳಿ ಅನ್ನೋದ್ರಲ್ಲೂ ಮಜ ಇರೋದು.
ಇತ್ತೀಚೆಗೆ ಪರಿಚಯ ಆದ ಜೆ.ಎಸ್.ಎಸ್ ಶಾಲೆಯ ಹೆಗಡೆ ಸರ್ ಒಂದು ದಿನ ಸಂಘದಿಂದ ಲೇಟಾದಾಗ ನಮ್ಮನ್ನ ರಾತ್ರಿ 11.30ಕ್ಕೆ ನಮ್ಮ ಮನೆಗೆ ಡ್ರಾಪ್ ಮಾಡಿದ್ರು ಮೊದಲೇ ಇದು ನೋಯ್ಡಾ ಡಕಾಯಿತರ ಏರಿಯಾ, 
ಸರಿಯಾಗಿ ಬಸ್ಸು, ಆಟೋ ಸಿಗೋದೇ ಕಷ್ಟ ಇತ್ತು 
ಸಕ್ಕತ್ ಚಳಿಲಿ ರಸ್ತೆ ಸರಿಯಾಗಿ ಕಾಣದ ದಪ್ಪವಾಗಿ ಕವಿದ ಮಂಜಿನಲ್ಲಿ ಅವರು ನಮ್ಮನ್ನು ಮನೆ ಸೇರಿಸಿದ್ದು ಎಂದೂ ಮರೆಯೋಕೆ ಆಗೊಲ್ಲ.   
ಇಂಥ ಸವಿ ನೆನಪುಗಳ ಮೂಟೆ ಕಟ್ಟಿಕೊಂಡು ಎಲ್ಲರನ್ನೂ ಬಿಟ್ಟು ಹೋಗ್ಬೇಕಲ್ಲ ಅನ್ನೋದೇ ಬೇಜಾರು.
ಆದ್ರೆ ಏನ್ ಮಾಡೋದು? ‘ಅಲ್ಲಿದೆ ನಮ್ ಮನೆ ಇಲ್ಲಿ ಬಂದೆ ಸುಮ್ಮನೆ’ ಅಂತ ನಮ್ಮ ತಾಯ್ನಾಡಿಗೆ ಹೋಗೋಣ ಅಂತ ಹೊರಡ್ತಿದೀನಿ... 
ನಿಮ್ಮೆಲ್ಲ ಹಾರೈಕೆ ನನಗಿರಲಿ. ಇನ್ನೂ ಹೇಳೋಕೆ ಹೋದ್ರೆ ತುಂಬಾ ಇದೆ.. ಆದ್ರೆ ಏನ್ ಮಾಡೋದು ನನ್ಗೆ ಬರೆಯೋ ಹವ್ಯಾಸ ಅಷ್ಟೊಂದು ಇಲ್ಲ. 
ಇದೇನಪ್ಪ ಬರೀ ಹೆಸರುಗಳಿಂದಲೇ ತುಂಬಿಸಿದಾನೆ ಅಂತಿರಾ ಅದೇ.. ಏನೋ ಮನಸಿಗೆ ತೋಚಿದ್ದು ಬರ್ದಿದೀನಿ... 
ಏನಪ್ಪ ಇಷ್ಟೊತ್ತು ಹಿಂಗೆ ಕುಯ್ದಾ ಅಂದ್ಕೊಂಡ್ರಾ ಏನೋ ಕ್ಷಮಿಸಿ ಬುದ್ದಿ..
ಒಟ್ನಲ್ಲಿ ಇದೆಲ್ಲ ನನ್ನ ದೆಹಲಿಯ ಸವಿ ಸವಿ ನೆನಪು ಸಾವಿರ ನೆನಪು...
ನಿಮ್ಮ 
ವೀರೇಶ ಹೊಗೆಸೊಪ್ಪಿನವರ

Saturday, January 29, 2011

ನಿಮ್ಮ ಪ್ರತಿಕ್ರಿಯೆಗಳು


ಕೆಂಪುಕೋಟೆ ಬ್ಲಾಗ್ ನೋಡಿ ಬಂದ ಕೆಲವು ಪ್ರತಿಕ್ರಿಯೆಗಳು.


I was very impressed with the layout of your blog. 
There is also so much happening  in the Kannada Loka of Delhi that I am unaware. 

With warm regards,
Professor VALERIAN RODRIGUES 
Centre for Political Studies, School of Social Sciences
Jawaharlal Nehru University, New Delhi

Heartiest congratulations on this refreshing initiative. 
Looking forward to accessing your site regularly and learn more about the happenings which you are meticulously chronicling. 
It is visually appealing too.

Regards
K.S. SACHIDANANDA MURTHY
Resident Editor
Malayala Manorama & The Week
Rafi Marg, New Delhi

ನೀವು   ಕುಟ್ಟಿದ ಕಟ್ಟಿದ  ಕೆಂಪು ಕೋಟೆ ಅತ್ಯಂತ ಉತ್ತಮವಾಗಿದೆ .  ತುಂಬಾ ವರ್ಣಮಾಯವಾಗಿದೆ .  ದಿನವೂ ಓದಲು ಮನಸ್ಸು ಹಾತೊರೆಯುತ್ತದೆ . ಎಷ್ಟೊಂದು ವಿಷಯಗಳು !  ನೀವು ನಿಮ್ಮ ಸಂಪಾದಕೀಯದಲ್ಲಿ ಒಂದು ಮಾಸಪತ್ರಿಕೆಯನ್ನೇ ನಡೆಸಬಹುದು ಎಂಬುದನ್ನು ಸಾಬೀತು ಮಾಡಿರುವಿರಿ. ಶ್ರೀ ಅಗ್ರಹಾರ  ಕೃಷ್ಣಮೂರ್ತಿ ಅವರೊಡನೆ ಸಂದರ್ಶನ ಆಶಾವಾದಿ ಧೋರಣೆಯಲ್ಲಿದ್ದು ಅನೇಕ ವಿಷಯಗಳನ್ನ್ಫು ತಿಳಿಸಿಕೊಟ್ಟಿದೆ. ಡಾ. ಪುರುಷೋತ್ತಮ ಬಿಳಿಮಲೆ ಅವರ 'ಕೆಂಪು ಕೋಟೆಯ  ಕಿಟಕಿಯಿಂದ' ಲೇಖನ ಉತ್ತಮ ಕವನವೊಂದನ್ನು ಓದುತ್ತಿರುವ ಅನುಭವವನ್ನು ಉಂಟುಮಾಡಿತು. ಉಳಿದಂತೆ ಮಿಕ್ಕ ಎಲ್ಲ ಕವನಗಳು, ಲೇಖನಗಳು , ಚಿತ್ರಗಳು ರಮ್ಯವಾಗಿವೆ. ಕೆಂಪು ಕೋಟೆ ಯಶಸ್ವಿಯಾಗಿ ನಡೆದುಬರುವುದರಲ್ಲಿ ಸಂದೇಹವೇ ಇಲ್ಲ.  ಸುಂದರವಾದ ಸುವಾಸನೆಭರಿತ ಮಲ್ಲಿಗೆಯ ಮಾಲೆಯನ್ನೇ ಕಟ್ಟುತ್ತಿರುವ ನಿಮಗೆ  ಹಾರ್ದಿಕ ಅಭಿನಂದನೆಗಳು.
ಕೃಷ್ಣಮೂರ್ತಿ ಕಲುಮಂಗಿ

ಪ್ರತಿಕ್ರಿಯಿಸಿದ ನಿಮಗೆಲ್ಲಾ ಧನ್ಯವಾದಗಳು!! Thank you Sirs!
ಬಾನಾಡಿ

ದೆಹಲಿಯೆಂಬ ನಗರ ಮತ್ತು ಯಮುನೆ

ರೇಣುಕಾ ನಿಡಗುಂದಿ

ದೆಹಲಿಯೆಂಬ ಮಹಾನಗರ. ಅದರೊಡನೆ ಹರಿಯುವ ಯಮುನಾ ನದಿ. 
ದೆಹಲಿಯ ಕವಯತ್ರಿ ರೇಣುಕಾ ನಿಡಗುಂದಿಯವರಿಗೆ ಕಾವ್ಯಲೋಕವನ್ನೇ ತೆರೆದು ಕೊಟ್ಟಿದೆ.
ಕನ್ನಡದ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ತಮ್ಮ ಕವನಗಳ ಮೂಲಕ ಪರಿಚಿತ
ರೇಣುಕಾ ಅವರ ಮೊದಲ ಸಂಕಲನ ಕಣ್ಣ ಕಣಿವೆ (2008).
ಕೆಂಪುಕೋಟೆ ಓದುಗರಿಗೆ ಈ ವಾರಾಂತ್ಯಕ್ಕೊಂದು ದೆಹಲಿಯದೇ ಕವನ.

ಈ ನಗರದ ತುಂಬ..
ಹಳೇ ಪಾಳುಬಿದ್ದ ಗುಮ್ಮಟಗಳು
ಮಂಕುಹಿಡಿದ ಮೀನಾರುಗಳು
ಮುರುಕು ಗೋಡೆಗಳ
ಒಡಕು ಬಿರುಕುಗಳಲ್ಲಿ
ಬಿಳಿ ನವಿಲಿನ ವೈಯ್ಯಾರ
ಜಾಲಿ ಪೊದೆಗೆ ಸಿಕ್ಕುಹಾಕಿಕೊಂಡಿದೆ.

ಸಾವಿರ ರಂಗಿನ ಕಾಮನಬಿಲ್ಲು
ಹಾಳು ಗೋಡೆಯ ಮೇಲೆ ಚಿತ್ರ ಬಿಡಿಸಿದೆ.
ಮಸಣದ ಕರಕು ವಾಸನೆ ಹಿಡಿದ
ತಲೆಹಿಡುಕರ ತಾಣ ಈ ಕೆಂಪುಕಲ್ಲಿನ ಗುಡಾಣ
ಮಹಾನಗರ ದೆಹಲಿ

ಕಲ್ಲು ಗೋಡೆಗಳ ಒಳನಾಡಿಗಳು
ಹೊಸೆದು - ಮಸೆದು ಜೀರ್ಣಿಸಿಕೊಂಡ
ಇತಿಹಾಸವೀಗ ಮರುಗುತ್ತಿದೆ
ಇಂದು
ಅಂದು
ಮೂಲೆ ಮೂಲೆಗೂ ಹಾಸಿ ಹೊದೆದ
ಅಮೃತಶಿಲೆಯ ಕುಸುರಿನಲ್ಲಿ
ಮೊಗಲ್ ಸಾಮ್ರಾಜ್ಯದ ಅಟಾಟೋಪ
ಗೋರಿಗಳ ಸುತ್ತ ಮೆಹಂದಿ ಚಿಗುರು
ನಡುಬಿಸಿಲಿಗೇರಿದ ಕಡುಗೆಂಪು ರಂಗು !

ತಣ್ಣಗೆ ಮುಲುಕಾಡುವ
ಕಲುಷಿತ ಯಮುನೆ
ಶೋಭಿತಳು ಪರಮ ಪೂಜಿತಳು
ಎಂದೋ,
ಇಂದು
ಕೊಳೆತು ನಾರುವ ನೀರಿನಲ್ಲಿ
ಹೂತ ವಸಂತಗಳು
ಹಸಿರು ಪಾಚಿಗಟ್ಟಿದ ನಡುಗಡ್ಡೆಗಳು
ಹರಿವೇ ಇಲ್ಲದ ಯಮುನೆಯಲ್ಲಿ ತುಂಡು ಚಂದ್ರ.

ಊರ ತುಂಬ ಮೊಂಡು ಹಿಡಿದ ಗಟಾರಗಳು
ಕೊಳಕು ನಾಲಾಗಳು
ಝುಗ್ಗಿ ಜೋಪಡಿಗಳು
ಕಮಲದ  ಬೇರಿನ ತರಕಾರಿ
ಪಾತಾಳಗಡ ಹಾಕಿ ಜಾಲಾಡುವ
ಮೀನುಗಾರರ ಹಿಂಡು
ಹೊಟ್ಟೆ ಪಾತಾಳ
ಬೆನ್ನು ತಾಮ್ರ
ಕಣ್ಣು ಕ್ಷಿತಿಜ
ಇಂಡಿಯಾ ಗೇಟ್
ದೇಹ ನೆಲ ಕಚ್ಚಿದ ದೋಣಿ
ಬದುಕು ಗಾಳ ಹಾಕುತ್ತಲೇ ಇದೆ
ಮೀನು ಹುಡುಕುತ್ತಲೇ ಇದೆ.
ನಿತ್ಯ ಬದುಕು ಗೋಲಿ ಗುಂಡಿನಂತೆ
ಉರುಳಾಡುತ್ತಿದೆ
ನಗರದ ತುಂಬ ಭೀತಿ
ಹಬೆಯಾಡುತ್ತಿದೆ !!

ಅದೇ
ಗಂಗೇಚ , ಯಮುನೇಚ ?.ಶ್ಲೋಕ
ಬಚ್ಚಲು ಮನೆಯಲ್ಲಿ
ಬೆಳಗಿನ ಸೂರ‍್ಯನ ಕೆಂಪು ಓಕುಳಿ
ತಾಯಿ ಯಮುನೆಗೆ ನಿತ್ಯದಾರತಿ !


ರೇಣುಕಾ ನಿಡಗುಂದಿ
ಕೆಂಪುಕೋಟೆ

Friday, January 28, 2011

ದೆಹಲಿಯ ದಿನಕರ ತಂಡದಿಂದ ಹಂಪಿಯಲ್ಲಿ ನಾಟಕ ಪ್ರದರ್ಶನ


ಕೆಂಪುಕೋಟೆ ವಿಶೇಷ ವರದಿ
ದಿಲ್ಲಿ ನಗರ (ಕನ್ನಡ) ಕಲಾವಿದರ ರಂಗ (ದಿನಕರ) ತಂಡದ ಮಹತ್ವಾಕಾಂಕ್ಷೆಯ ಪ್ರಯೋಗ ನಾ ಸತ್ತಿಲ್ಲ ನಾಟಕವನ್ನು ಹಂಪಿ ಉತ್ಸವದಲ್ಲಿ ಪ್ರದರ್ಶಿಸಲು ತಂಡವು ದೆಹಲಿಯಿಂದ ಹಂಪಿಗೆ ಪ್ರಯಾಣ ಬೆಳೆಸಿದೆ.
ನಾ ಸತ್ತಿಲ್ಲ ನಾಟಕದ ದೃಶ್ಯ
ತಂಡವು ಈಗಾಗಲೇ ದೆಹಲಿಯಲ್ಲಿ ಈ ನಾಟಕದ ಎರಡು ಪ್ರಯೋಗಗಳನ್ನು ಮಾಡಿ ದೆಹಲಿಯ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದೆ.
ಬರಹಗಾರ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಕೃತಿ ನಾ ಸತ್ತಿಲ್ಲ ನಾಟಕವನ್ನು ಶಿವಾನಂದ ಇಂಗಳೇಶ್ವರ ಅವರು ನಿರ್ದೇಶಿಸಿದ್ದಾರೆ. 
ರಂಗದಲ್ಲಿ ಟಿ.ಎಸ್. ರಮೇಶ್, ಶ್ಯಾಮ ಸುಂದರ್, ಶ್ರೀನಿವಾಸ ಮೂರ್ತಿ ಡಿ.ಎ., ಹೆಚ್.ಕೆ.ರವಿಕುಮಾರ್, ಎಸ್.ಕುಮಾರ್, ಮಲ್ಲಣ ಗೌಡ, ಶಿವಾನಂದ ಇಂಗಳೇಶ್ವರ ಅಲ್ಲದೇ ಹಿನ್ನಲೆಯಲ್ಲಿ ಆಶಾ ಶ್ಯಾಮ ಸುಂದರ್, ಎಸ್.ಎಸ್. ಗೋವಿಂದರಾಜ್, ಶಶಿಕಾಂತ ಪಾಟೀಲ್ ಮೊದಲಾದವರಿದ್ದಾರೆ. 
ನಾ ಸತ್ತಿಲ್ಲ ನಾಟಕದ ದೃಶ್ಯ
ದಿನಕರ ತಂಡವು ಈ ಮೊದಲು ಕುಂ. ವೀರಭದ್ರಪ್ಪನವರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಅವರನ್ನು ದೆಹಲಿಯಲ್ಲಿ ಗೌರವಿಸಿದ ಸಂದರ್ಭ ಕುಂವೀ ಅವರ ಪಯಣ ಕಥೆಯ ನಾಟಕ ರೂಪಾಂತರ ನಾರಾಯಣ ಸ್ವಾಮಿ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿತ್ತು.
ಧನಬಲ, ತೋಳ್ಬಲ, ಕುತಂತ್ರಗಳ ಮೂಲಕ ಸತ್ಯ, ಅಹಿಂಸೆ, ತತ್ವಾದರ್ಶಗಳನ್ನೆಲ್ಲಾ ಕೊಲ್ಲುವ ಪ್ರಯತ್ನವನ್ನು ನಾಟಕವು ಬಿಂಬಿಸುತ್ತದೆ.
ಜನವರಿ 28 ರಂದು ಹಂಪಿಯಲ್ಲಿ, 29 ರಂದು ಬಿಜಾಪುರದಲ್ಲಿ ಮತ್ತು 30ರಂದು ಇಡಕಲ್‍ನಲ್ಲಿ ನಾಟಕದ ಪ್ರದರ್ಶನವು ನಡೆಯಲಿದೆ.
ಕೆಂಪುಕೋಟೆ

Thursday, January 27, 2011

ಯಶಸ್ವೀ ಕಲಾಪ್ರದರ್ಶನ

ಸುಧೀರ್ ಫಡ್ನೀಸ್ ಅವರ ಕಲಾಕೃತಿಗಳು

ಕಲಾವಿದರಾದ ಸುಧೀರ್ ಫಡ್ನೀಸ್, ರಮೇಶ್ ಪಚ್‍ಪಾಂಡೇ, ಎಫ್.ವಿ.ಚಿಕಮಠ್, ದೇವೇಂದ್ರ ಎಂ. ಬಡಿಗೇರ್, ದಯಾನಂದ ಕಮಾಕರ್, ಬಿ.ಪಿ.ಕಾರ್ತಿಕ್ ಅವರ ಕಲಾಕೃತಿಗಳ ಪ್ರದರ್ಶನವು ದೆಹಲಿಯ ಐಫಾಕ್ಸ್ ನಲ್ಲಿ ಜನವರಿ 18ರಿಂದಿಂದ 24 ರ ವರೆಗೆ ನಡೆಯಿತು. 
ಇಂಡಿಯ ಆರ್ಟ್ ಸಮ್ಮಿಟ್ ನ ಸಮಾನಾಂತರವಾಗಿ ನಡೆದ ಈ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಕಲಾವಿದ ಸುಧೀರ್ ಫಡ್ನೀಸ್ ಅವರು ತಿಳಿಸಿದರು. ಕಲಾವಿದರು ತಮ್ಮ ನೂತನ ಕಲಾಕೃತಿಗಳನ್ನು ಪ್ರದರ್ಶನಗೊಳಿಸಿದರು. 
ಬಿ.ಪಿ. ಕಾರ್ತಿಕ್ ಅವರ ಕೃತಿಗಳಲ್ಲಿ ಅಸಂಗತೆಗಳ ಜತೆಗೆ ಪ್ರಕೃತಿಯ ವಿಲಕ್ಷಣತೆಯನ್ನು ಕಾಣಬಹುದಿತ್ತು. ಬೆಂಗಳೂರಿನಲ್ಲೆ ನೆಲೆಸಿರುವ ಈ ಕಲಾವಿದ ಬಣ್ಣಗಳಿಂದ ಕ್ಯಾನ್‍ವಾಸ್ ಮೇಲೆ ಕಾವ್ಯವನ್ನು ಸೃಷ್ಟಿಸುತ್ತಾರೆ. ಹಳೆಯ ಚೌಕಟ್ಟುಗಳಿಗೆ ಹೊಸದಾದ ತಾಜತನದಿಂದ ಕೂಡಿದ ಬಗೆಯನ್ನು ಬರೆಯುವ ಇವರ ಕಲಾಕೃತಿಗಳು ನಮ್ಮನ್ನು ಸುಂದರ ಲೋಕವೊಂದಕ್ಕೆ ಕೊಂಡೊಯ್ಯುತ್ತವೆ.
ಬಿಜಾಪುರ ಮೂಲದ ದೇವೇಂದ್ರ ಬಡೀಗೇರ್ ಅವರ ಕಲಾಕೃತಿಗಳು ನೈಜ ಬದುಕಿನ ವಿಶಿಷ್ಟತೆಗಳನ್ನು ತೋರುತ್ತಿತ್ತು. ರಮೇಶ್ ಪಚ್‍ಪಾಂಡೇ ಅವರು ಪೇಪರ್ ಮತ್ತು ಇದ್ದಿಲ ಮೂಲಕ ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದರು.
ಸುಧೀರ್ ಫಡ್ನೀಸ್ ಅವರ ಕಲಾಕೃತಿಗಳು ಬದುಕಿನ ವಿವಿಧ ಸ್ತರಗಳ ಆಳವನ್ನು ಪ್ರತಿಬಿಂಬಿಸುತ್ತಿದ್ದವು. ಸಮಗ್ರ ವಿಶ್ವವನ್ನೇ ತಮ್ಮೊಳಗಿಸಿಕೊಂಡಿರುವ ಇವರು ತಮ್ಮ ಭಾವನೆಗಳನ್ನು ಕುಂಚದ ಮೂಲಕ ಕ್ಯಾನ್‍ವಾಸ್‍ನಲ್ಲಿ ಹಿಡಿದು ತೋರಿಸುತ್ತಾರೆ.ಸಡಗರ, ಸಂವೇದನೆ ಮತ್ತು ಆಧುನಿಕ ಬದುಕಿನ ಉತ್ಸುಕತೆಗಳು ಇವರ ಕೃತಿಗಳಲ್ಲಿ ಕಾಣಬಹುದು.


ಎಫ್. ವಿ. ಚಿಕಮಠ್ ಅವರ ಕಲಾಕೃತಿಗಳು

ಬಿ.ಪಿ. ಕಾರ್ತಿಕ್ ಅವರ ಕಲಾಕೃತಿಗಳು



ಸುಧೀರ್ ಫಡ್ನೀಸ್ ಅವರ ಕಲಾಕೃತಿಗಳು
ದೇವೇಂದ್ರ ಬಡಿಗೇರ್ ಅವರ ಕಲಾಕೃತಿಗಳು

 

Tuesday, January 25, 2011

Republic Day 2011


Each year, 26th January is a day on which every Indian heart fills up with patriotic fervour and immense love for motherland. There are many significant memories as it was this day when the Indian Tricolour was first unfurled in January 1930 at Lahore, by Pt Jawaharlal Nehru and the declaration of an independent Indian National Congress was made.
26th January, 1950 was the day when the Indian republic and its constitution came into force. It was this day in history in 1965 when Hindi was declared as the official language of India.
Celebrations Galore
Republic Day is celebrated every year with much enthusiasm all over the country and to mark the importance of this occasion, a grand parade is held in the capital, New Delhi, from Raisina Hill near the Rashtrapati Bhavan (President's House), along the Rajpath, past India Gate and on to the historic Red Fort.
The event begins with the Prime Minister of India laying a wreath at the Amar Jawan Jyoti at India Gate, commemorating all the soldiers who sacrificed their lives for the country. Soon, a 21 gun salute is presented, the President unfurls the National Flag and the National Anthem is played. This marks the beginning of the parade.
The President is accompanied by a notable foreign Head of State - who is the invited Chief Guest at the celebration.
The Parade begins with winners of gallantry awards passing the President in open jeeps. President of India, who is the Commander-in-Chief of the Indian Armed Forces, takes the salute at the grand parade. The Indian Military also showcases its latest acquisitions such as tanks, missiles, radars, etc.
Soon after, awards and medals of bravery are given by the President to the people from the armed forces for their exceptional courage in the field and also to those civilians who have distinguished themselves by their different acts of valour in different situations.
After this, helicopters from the armed forces fly past the parade area showering rose petals on the audience.
The President, Smt. Pratibha Devisingh Patil and the Prime Minister,
Dr. Manmohan Singh at the ceremonial reception of the
President of the Republic of Indonesia, Dr. H. Susilo Bambang Yudhoyono
 at Rashtrapati Bhawan, in New Delhi on January 25, 2011.
Mrs. Hj. Ani Bambang Yudhoyono, Smt. Gursharan Kaur and
 Dr. Devisingh Ramsingh Shekhawat are also seen.
The military parade is followed by a colourful cultural parade. India's rich cultural heritage is depicted in the form of tableaus from various states. Each state depicts its unique festivals, historical locations and art. This exhibition of diversity and richness of the culture of India lends a festive air to the occasion.
Tableaus from various government department and ministries of India are also presented displaying their contribution towards the progress of the nation. The most cheered section of the parade is when the children who have won National Bravery Awards ride past the dais on elephants. School-children from all over the country also participate in the parade showcasing folk dances and singing to the tunes of patriotic songs.
The parade also includes displays of skilful motor-cycle rides, by the Armed Forces personnel. The most eagerly awaited part of the parade is the fly past, put on by the Indian Air Force. The fly past marks the conclusion of the parade, when fighter planes of the IAF roar past the dais, symbolically saluting the President.

Monday, January 24, 2011

Golden Jubilee Annual Day


ಶ್ರದ್ಧಾಂಜಲಿ : ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿ


 
 
 
ಫೆಬ್ರವರಿ 22, 1922 - ಜನವರಿ 24, 2011

India Art Summit-2011





ಪಿಕಾಸೋ ನ ಕಲೆಗೆ ಮಾರುಹೋದ ಆನಂದ ಮುರುಗೋಡ್






ಮಂಜುನಾಥ್ ಕಾಮತ್ ಕಲಾಕೃತಿ

ಮಂಜುನಾಥ್ ಕಾಮತ್ ಕಲಾಕೃತಿ
ಎಲ್ಲಾ ಚಿತ್ರಗಳು: BALAKRISHNA NAIK D.
More @ facebook

Sunday, January 23, 2011

ದೇಸಿ ಪುಸ್ತಕದ ರೈತನಾಗುವ ಹಾದಿಯಲ್ಲಿ


ಬೆಂಗಳೂರಿನ ಗೆಳೆಯ ಸೃಷ್ಟಿ ನಾಗೇಶ್ ತನ್ನ ದೇಸಿ ಪುಸ್ತಕದ ಮೂಲಕ ಪ್ರಕಟಿಸುವ ಎಸ್.ಮಧುಸೂಧನ್ ಪೆಜತ್ತಾಯ ಅವರು ಬರೆದ  ’ರೈತನಾಗುವ ಹಾದಿಯಲ್ಲಿ’ ಕನ್ನಡ ಪುಸ್ತಕಲೋಕದಲ್ಲಿ ಈಗಾಗಲೇ ಒಂದು ಭರವಸೆಯ ಕೃತಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಪುಸ್ತಕದ ಬೆನ್ನುಡಿಯಲ್ಲಿ ಜಿ.ಎಸ್.ಎಸ್. ರಾವ್ ಅವರು ಯಶಸ್ವೀ ರೈತರೊಬ್ಬರು, ಸುಮಾರು ನಲವತ್ತೈದು ವರ್ಷಗಳ ಹಿಂದೆ, ರೈತರಾಗಲು ಹೊರಟಾಗಿನ ಪ್ರಾರಂಭದ ಒಂದು ವರ್ಷದ ಕಥೆ! ಎಂದು ಬರೆಯುತ್ತಾರೆ.
ಆಮಂತ್ರಣ ಪತ್ರಿಕೆ
ಆದರ್ಶದ ಬೆನ್ನು ಹತ್ತಿದ ಯುವಕನೊಬ್ಬನ ನಿಜ ಜೀವನದ ಸಾಹಸಗಾಥೆಯನ್ನು ಕಥೆಯಾಗಿಸಿದ್ದಾರೆ, ಪೆಜತ್ತಾಯರು. ತಾವು ನಡೆದ ಹಾದಿಯಲ್ಲಿ ಎದುರಾದ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರೀತ್ಯಗಳು, ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಈ ಕೃತಿಯ ತಿರುಳು. ವಿಷಾದದಲ್ಲಿ ಕೊನೆಯಾಗಬಹುದಾಗಿದ್ದ ಘಟನೆಗಳು ಕೂಡ ತಿಳಿಹಾಸ್ಯದ ಲೇಪನವನ್ನೊಳಗೊಂಡು ಸಹ್ಯವಾಗಿಬಿಡುತ್ತವೆ. ಸಮಾಜದ ಮತ್ತು ಪರಿಸರಸದ ಅವಿಭಾಜ್ಯ ಅಂಗವೆಂದು ತಮ್ಮನ್ನು ಗುರುತಿಸಿಕೊಂಡಿರುವ ಪೆಜತ್ತಾಯರು, ರೋಚಕ ಚಿತ್ರಗಳನ್ನು ನೀಡುತ್ತಾರೆ. ತಾವು ಪಟ್ಟ ಪಾಡನ್ನು ಹಾಡಾಗಿಸಿರುವ ಕೃತಿ ಇದು, ಎನ್ನುತ್ತಾರೆ ರಾವ್ ಅವರು.
ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ’ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಇವರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಅವರು ’ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ.
ಪುಸ್ತಕವನ್ನು ಸಂಪಾದಿಸಿದ ಬೆಂಗಳೂರಿನ ಡಾ. ಬಿ.ಆರ್. ಸತ್ಯನಾರಾಯಣ ಅವರು  ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು ಎನ್ನುತ್ತಾರೆ. ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ನಾನೊಬ್ಬ ರೈತ, ಮಡ್ಡ, ದಡ್ಡ ಎಂದು ಹೇಳಿ ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು!
ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು, ಒಡನಾಡಿದ ಜನಸಮೂಹ ಎಲ್ಲವೂ ಈ ಬರಹದಲ್ಲಿ ಬಂದು ಹೋಗುತ್ತವೆ. ಯಾವುದೇ ರಸವತ್ತಾದ ಕಾದಂಬರಿಗಳ ಪಾತ್ರವನ್ನೂ ಮೀರಿಸಬಲ್ಲಂತಹ ಪಾತ್ರಗಳು ಅವರ ನಿಜಜೀವನದಲ್ಲಿ ಬಂದು ಹೋಗಿರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಬದುಕಿನ ಸೊಗಡು ಸಹಜವಾಗಿಯೇ ನಮಗೆ ದಕ್ಕುವುದು ಅವರು ನೆನಪಿನಲ್ಲಿಟ್ಟುಕೊಂಡು ಚಿತ್ರಿಸಿರುವ ಆ ಮುಗ್ಧ ಹಳ್ಳಿಗರ ಪಾತ್ರಗಳಿಂದ! ಕುವೆಂಪು, ಕಾರಂತ, ಗೊರೂರು, ತೇಜಸ್ವಿ, ದೇವನೂರು ಮೊದಲಾದವರ ಕಥೆ ಕಾದಂಬರಿಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಂದು ಪುಟ್ಟ ಮೆರವಣಿಗೆ ಈ ಕೃತಿಯ ಓದುಗನ ಮನಸ್ಸಿನಲ್ಲಿ ನಡೆದು ಹೋದರೆ ಆಶ್ಚರ್ಯವೇನಲ್ಲ ಎನ್ನುತ್ತಾರೆ ಸತ್ಯನಾರಾಯಣ ಅವರು. ಲೇಖಕ ಅಬ್ದುಲ್ ರಶೀದ್ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ಪುಸ್ತಕವನ್ನು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ನಾರಾಯಣ ಗೌಡರ ಅಧ್ಯಕ್ಷತೆಯಲ್ಲಿ ಚಿಕ್ಕಬಳ್ಳಾಪುರದ ಪ್ರಗತಿಪರ ರೈತರಾದ ನಾಡೋಜ ನಾರಾಯಣ ರೆಡ್ಡಿ ಅವರು ಬೆಂಗಳೂರಿನಲ್ಲಿ ಜನವರಿ ೨೫ರಂದು ಬಿಡುಗಡೆಗೊಳಿಸಲಿದ್ದಾರೆ. ಈ ವಿಶಿಷ್ಟ ಯೋಜನೆಯಲ್ಲಿ ತೊಡಗಿಸಿಕೊಂಡವರಿಗೆಲ್ಲರಿಗೂ ಅಭಿನಂದನೆಗಳು.
ಕೆಂಪುಕೋಟೆ

Saturday, January 22, 2011

ಆಮಂತ್ರಣ :ಚಿತ್ರಕಲಾ ಪ್ರದರ್ಶನ

ದೆ.ಕ.ಸಂ. ನಲ್ಲಿ ಚಿತ್ರಕಲಾ ಪ್ರದರ್ಶನದ ಆಮಂತ್ರಣ

ಪೀಳಿಗೆಗಳ ಎಲ್ಲೆ ಮೀರಿ ಅಂತರ್ಜಾಲದತ್ತ ಸೆಳೆತ


ಹರಿಪ್ರಸಾದ್ ನಾಡಿಗ್ 

ವಿಕಿಪೀಡಿಯಾ ಡಾಟ್ ಕಾಮ್ ಅಂತರ್ಜಾಲದಲ್ಲಿರುವ ಒಂದು ಮುಕ್ತ ವಿಶ್ವಕೋಶ. ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಜನವರಿ ಹತ್ತರಂದು ವಿಶ್ವದೆಲ್ಲೆಡೆ ಆಚರಿಸಲಾಯಿತು. ವಿಕಿಪೀಡಿಯಾ ಇಂದು 262 ಭಾಷೆಗಳಲ್ಲಿ ಲಭ್ಯ.
ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿ ಪರ್ಯಟನೆಯಲ್ಲಿರುವಾಗ ಅದರ ಭಾರತೀಯ ವ್ಯವಸ್ಥಾಪಕ ಸದಸ್ಯರಾಗಿರುವ ಕನ್ನಡಿಗ ಹರಿಪ್ರಸಾದ್ ನಾಡಿಗ್ ಅವರ ಜೊತೆ ಒಂದು ಭೇಟಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ  ಕನ್ನಡವನ್ನು ವಿಕಿಪೀಡಿಯದಲ್ಲಿ ಹೇಗೆ ಅಳವಡಿಸುವುದು ಎಂಬ  ಸಂವಾದ ನಡೆಯಿತು. ವಿಕೀಪೀಡಿಯಾವನ್ನು ಕನ್ನಡ ಭಾಷೆಯಲ್ಲಿ ಆರಂಭಿಸಿದ ಹಿನ್ನಲೆ,ಬೆಳವಣಿಗೆಯ ಕುರಿತು ನಾಡಿಗ್ ಅವರು ವಿವರ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈ. ಅವನೀಂದ್ರನಾಥ್ ರಾವ್ ಅವರ ಪ್ರಕಾರ ಕನ್ನಡ ಮುಕ್ತ ವಿಶ್ವಕೋಶದ ಅಭಿವೃದ್ದಿಗೆ ನಾಡಿನ ಹಿರಿಯ ಭಾಷಾಶಾಸ್ತ್ರಜ್ಞರ ಪಾಲ್ಗೊಳ್ಳುವಿಕೆ ಇದ್ದರೆ ಬಹಳ ಅನುಕೂಲವಾಗಬಹುದಂತೆ.
ಕನ್ನಡವನ್ನು ವಿಶ್ವವ್ಯಾಪಿಗೊಳಿಸುವಲ್ಲಿ ಹಾಗೂ ತಂತ್ರಜ್ಞಾನದ ಬಳಕೆಯಿಂದ ಭಾಷೆಯನ್ನು ಜೀವಂತವಾಗಿಡಲು ಅವರು ಪಡುವ ಪ್ರಯತ್ನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.  ಹರಿಪ್ರಸಾದ್ ನಾಡಿಗ್ ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಯುವ ಕನ್ನಡಿಗರು ಹೆಚ್ಚು ಉತ್ಸುಕತೆಯಿಂದ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರನ್ನು"ಐ ವಾಂಟ್ ಟು ಲರ್ನ್ ಕನ್ನಡ, ಈಸ್ ದೇರ್ ಎನಿ ಆಪ್ಲಿಕೇಷನ್ ಇನ್ ಇಂಟರ್ನೆಟ್?” ಎಂದು ಒಬ್ಬಳು ಹುಡುಗಿ ಕೇಳಿದ ಪ್ರಶ್ನೆ ಮಂತ್ರಮುಗ್ಧಗೊಳಿಸಿತು ಎನ್ನುತ್ತಾರೆ. ಅಂದು ಅಕೆಯ ಆ ಪ್ರಶ್ನೆಗೆ ದೊರೆತ ಉತ್ತರಕಿಂತಲೂ ಅವರ ಮನಸಲ್ಲಿ ಅದುವರೆಗೆ ಅಚ್ಚಾಗಿದ್ದ ಹೊರನಾಡ ಕನ್ನಡ ಸಂಘ ಸಂಸ್ಥೆಗಳಲ್ಲಿ ನಡೆಯುವ ಸಂವಾದ ಕಾರ್ಯಕ್ರಮಗಳು ಹೀಗೆಯೇ ಇರುತ್ತದೆ ಎಂಬ ಭಾವನೆ ಒಡೆದು ಚೂರು ಚೂರಾಗಿ ಹೊಸ ವಿಚಾರವೊಂದು ಮನವಿಡೀ ಸುಳಿದಾಡ್ಡಿತ್ತು ಎನ್ನುತ್ತಾರೆ ಅವರು. ದೆಹಲಿಯ ಕನ್ನಡ ಕಾರ್ಯಕ್ರಮಗಳಲ್ಲಿ ವಿರಳವಾಗಿ ಮತ್ತು ಕಡಿಮೆ ಆಸಕ್ತಿಯಿಂದ ಭಾಗವಹಿಸುತ್ತಿದ್ದ ಯುವಕರು ಅಂದು ಬಹಳ ತನ್ಮಯತೆಯಿಂದ ಕುಳಿತಿದ್ದರು.
ಪ್ರಕಾಶ್ ಶೆಟ್ಟಿ ಅವರ ಪ್ರಕಾರ  ತಮ್ಮನ್ನು ತಾವು ಆಧುನಿಕತೆಯೊಂದಿಗೆ ಮಿಳಿಸಿಕೊಂಡು ಅತಿ ವೇಗದಿಂದ ಬೆಳೆಯುತ್ತಿರುವ ಈ ಯುವ ಮನಸುಗಳಿಗೆ ಕನ್ನಡದ ಹೆಚ್ಚಿನೆಲ್ಲ ಕಾರ್ಯಕ್ರಮಗಳಲ್ಲಿ ಬಹು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದ ಹಳೆಯ ತಲೆಗಳೊಂದಿಗೆ ಬೆರೆಯುವುದೆಂದರೆ ಅದೇಕೋ ಸರಿ ಬರುತ್ತಿರಲಿಲ್ಲ. ಆದರೆ ಅಂದು ನಡೆದ ಕಾರ್ಯಕ್ರಮದ ಸೆಳೆತವೇ ಹಾಗಿತ್ತು. ಒಂದು ಚಿಕ್ಕ ಮಗು ಇನ್ನೊಂದು ಮಗುವಿನತ್ತಲೇ ಆಕರ್ಷಿತವಾಗುತ್ತದೆ. ಒಬ್ಬ ನಡು ವಯಸ್ಕ ಆತನ ವಯಸ್ಸಿನವನ ಜತೆಯೇ ಮಾತನಾಡಲು ಬಯಸುತ್ತಾನೆ. ಒಬ್ಬರು ಹಿರಿಯರು ಅವರ ಸಮಪ್ರಾಯರಾದವರನ್ನೇ ತಮ್ಮ ಅನುಭವವನ್ನು ಹಂಚಿಕೊಳ್ಳಲು ಆರಿಸಿಕೊಳ್ಳುತ್ತಾರೆ. ಅಂದು ಆದದ್ದೂ ಅದೆ. ತಮ್ಮದೇ ವಯೋಮಾನದವರಾದ ೨೮ರ ಹರೆಯದ ನಾಡಿಗ್ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆಂದರೆ ಅಂದಿನ ಯುವ ಪೀಳಿಗೆಯೇ ಅಲ್ಲಿರುವುದು ಗ್ಯಾರಂಟಿ ಎನ್ನುವುದು ನನ್ನ ಊಹೆಯಾಗಿತ್ತು ಹಾಗೂ ಅದು ಸಾಕಾರವೂಗೊಂಡಿತ್ತು ಎನ್ನುತ್ತಾರೆ ಪ್ರಕಾಶ್ ಶೆಟ್ಟಿ.
ವಿಕಿಪೀಡಿಯಾ ಲೊಗೋ
ಅಲ್ಲಿ ಇನ್ನೊಂದು ವಿಶೇಷವೂ ನಡೆದಿತ್ತು. ಸಾಮಾನ್ಯವಾಗಿ ಹಿರಿಯರು ಆಧುನಿಕ ತಂತ್ರಜ್ಞಾನವನ್ನು ಅರಿತಿರುವುದಿಲ್ಲ ‘ಡ್ಯೂಡ್... ದೇ ಆರ್ ಇಲ್ಲಿಟರೇಟ್ ಇನ್ ದೀಸ್ ಥಿಂಗ್ಸ್ ಮ್ಯಾನ್’ ಅಂದುಕೊಳ್ಳುವ ಈ ಹುಡುಗರು ಅಲ್ಲಿ, ಐಟಿ ಕ್ಷೇತ್ರದಲ್ಲಿರುವ ಹಿರಿಯರ ಆಳವಾದ ಜ್ಞಾನವನ್ನೂ ಸಾಕ್ಷಾತ್ ಕಂಡು, ಹೌದು ನಾವು ಇವರೊಂದಿಗೆ ಬೆರೆತು ತಮ್ಮ ಅಲ್ಪ ಜ್ಞಾನವನ್ನು ಬೆಳೆಸಬಹುದಲ್ವೇ? ಎನ್ನುವ ಅಭಿಪ್ರಾಯಕ್ಕೆ ಬರಲು ಪ್ರೇರೇಪಿಸಿದ ಕಾರಣಕ್ಕೂ  ಪ್ರಕಾಶ್ ಅವರಿಗೆ ಈ ಕಾರ್ಯಕ್ರಮ ಮುಖ್ಯವಾಯಿತು.
ಸಾಮಾನ್ಯವಾಗಿ ಸನ್ಮಾನ ಕಾರ್ಯಕ್ರಮ, ಸಾಹಿತ್ಯ ವಿಮರ್ಶೆ, ರಾಜಕೀಯ ಮುಂತಾದ ನಿರಾಸಕ್ತ ಕಾರ್ಯಕ್ರಮಗಳಿಗೆ ಆಕರ್ಷಿತರಾಗದ ಯುವ ಜನತೆಯನ್ನು ಸೆಳೆಯಲು ಅವರದೇ ಪ್ರಪಂಚದ ಇಂತಹ ಆಧುನಿಕ ಕಾರ್ಯಕ್ರಮಗಳು “ಮಮ್ಮಿ ದ್ಯಾಟ್ಸ್ ಆಲ್ ನಾಟ್ ಫಾರ್ ಅಸ್” ಅಥವಾ ‘ಐ ಡೋಂಟ್ ಲೈಕ್ ದ್ಯಾಟ್ ಆಂಟೀಸ್ ಪ್ರೊಗ್ರಾಂ’ ಅನ್ನುವ ಮಕ್ಕಳನ್ನೂ ಆಕರ್ಷಿಸಬಹುದು ಎನ್ನುವುದು ಪ್ರಕಾಶ್ ಶೆಟ್ಟಿ ಅವರ ಅಭಿಮತ.
ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷ ಡಾ. ವೆಂಕಟಾಚಲ ಹೆಗ್ಡೆ ಅವರು ಈ ನಿಟ್ಟಿನಲ್ಲಿ ಭರವಸೆಯ ಮಾತನ್ನು ಆಡಿದ್ದಾರೆ.
ಸಂವಾದದಲ್ಲಿ ಭಾಗವಹಿಸಿದ ಮೋಹೇರ್ ಶೆಟ್ಟಿ ಅವರು ಈ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ವಿಕಿಪೀಡಿಯಾ ಮೂಲಕ ನಮ್ಮ ಮಾತೃ ಭಾಷೆಯನ್ನು ವಿಶ್ವವ್ಯಾಪಿ ಗೊಳಿಸುವುದರೊಂದಿಗೆ ವಿಶ್ವಜ್ಞಾನವನ್ನು ನಮ್ಮ ಭಾಷೆಯಲ್ಲಿಯೇ ಅರಿಯುವುದು ಮನಸ್ಸಿಗೆ ಬಹಳ ಮುದ ನೀಡುವ ವಿಚಾರ ಎಂದರು. ಕನ್ನಡ ಓದಲು ಬರೆಯಲು ಬಾರದ ಹೊರನಾಡಲ್ಲಿ ಹುಟ್ಟಿದ ಕನ್ನಡದ ಹೊಸ ಪೀಳಿಗೆಗೆ ಕನ್ನಡ ಕಲಿಸಿ ಅಂತರ್ಜಾಲದಂತಹ ಆಧುನಿಕ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಡಾ. ಪುರುಷೋತ್ತಮ ಬಿಳಿಮಲೆ ನುಡಿದರು. ವಿಕಿಪೀಡಿಯಾದ ಹತ್ತನೇ ವಾರ್ಷಿಕೋತ್ಸವ ದೆಹಲಿಯ ಕನ್ನಡದ ಹಳೆಯ ಮತ್ತು ಹೊಸ ಪೀಳಿಗೆಗಳನ್ನು ಒಂದೇ ವೇದಿಕೆಗೆ ಕರೆ ತರುವಲ್ಲಿ ಯಶಸ್ವಿಯಾಯಿತು.
ಕೆಂಪುಕೋಟೆ.

Thursday, January 20, 2011

ಕೆಂಪು ಕೋಟೆಯ ಕಿಟಿಕಿಯಿಂದ


ಅಂತರ್ಜಾಲದಲ್ಲೊಂದು ಕೆಂಪುಕೋಟೆಯನ್ನು ಕಟ್ಟುವ ಕನಸು ಕಂಡಾಗ, ಆ ಕನಸುಗಳಿಗೆ ಆಕಾರ ಕೊಡಲು ಹುಮ್ಮಸ್ಸು ನೀಡಿದವರು ಡಾ. ಪುರುಷೋತ್ತಮ ಬಿಳಿಮಲೆ. ಈ ವಿಶಾಲ ಸಾಗರದಲ್ಲಿ ಮುತ್ತುಗಳನ್ನು ಹೆಕ್ಕಲು ಹುರಿದುಂಬಿಸಿದ ಡಾ. ಬಿಳಿಮಲೆಯವರು ಬರೆದ ಆತ್ಮೀಯ ಬರಹ  ಕೆಂಪುಕೋಟೆಯ ಓದುಗರಿಗೆ.  
ಡಾ.ಪುರುಷೋತ್ತಮ ಬಿಳಿಮಲೆ

ಶಹಾಜಹಾನನಿಗೆ ಯಮುನಾ ನದಿಯೆಂದರೆ ಎಲ್ಲವೂ.
ಆಗ್ರಾದಲ್ಲಿ ನಿಧಾನವಾಗಿ ಹರಿಯುವ ಯಮುನೆಯ ಸುಂದರ  ಬಳುಕಿನ ಆಯಕಟ್ಟಿನ ಜಾಗದಲ್ಲಿ ಆತ  ತನ್ನ ಪ್ರಿಯತಮೆಯ ನೆನಪುಗಳನ್ನು ತಾಜಮಹಾಲಾಗಿಸಿದ. 1638ರಲ್ಲಿ ಆತ ತನ್ನ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಿ, ಮತೊಮ್ಮೆ ಯಮುನೆಯ ಬಲದಂಡೆಯಲ್ಲಿ ಕೆಂಪುಕೋಟೆ ಕಟ್ಟಿದ.
ಒಂಬತ್ತು ವರುಷಗಳ ಸತತ ಪ್ರಯತ್ನದ ಆನಂತರ 14 ಹೆಬ್ಬಾಗಿಲುಗಳುಳ್ಳ ಸುಂದರ ಕೋಟೆ ದೆಹಲಿಯಲ್ಲಿ ತಲೆ ಎತ್ತಿ ಆಗ್ರಾವನ್ನು ಅಣಕಿಸತೊಡಗಿತು.
ಈಗ ಈ ಕೋಟೆಯ ತುಂಬ ನಡೆದಾಡಿದರೆ ಇತಿಹಾಸ, ವರ್ತಮಾನ, ಭವಿಷ್ಯತ್ತುಗಳೆಲ್ಲಾ ಒಂದರೊಡನೊಂದು ಬೆರೆತು ಇವಾವೂ ಅಲ್ಲದ ಬೇರೆಯದೇ ಆದ ಭ್ರಾಮಕ ಲೋಕವೊಂದು ಮೌನವಾಗಿ ರೂಪುದಳೆಯುತ್ತದೆ.
ಕೋಟೆಯ ಕೆಂಪು ಕಲ್ಲುಗಳೆಲ್ಲಾ ಬೆಳದಿಂಗಳು ಚೆಲ್ಲಿದಂತಿರುವ ಚಂದ್ರಕಾಂತ ಶಿಲೆಯೊಳಗೆ ಕರಗತೊಡಗಿದಾಗ ನಮ್ಮ ವಾಸ್ತವಗಳೆಲ್ಲ ಕನಸಿನ ದೋಣಿಯನೇರಿ ಯಮುನೆಯಲ್ಲಿ ತೇಲತೊಡಗುತ್ತವೆ. ಕೆಂಪುಕೋಟೆಯ ತುಂಬ ಅರಸನ ಬಯಕೆಗಳ ಪ್ರತಿಮೆಗಳು.
ಕೋಟೆಯೊಳಗೆ ನೂಬತ ಖಾನ (ಡೊಳ್ಳು ಮನೆ)ವಿದ್ದು ಅದು ಹೊರಡಿಸುವ ನಾದತರಂಗಗಳಿಗೆ ದೆಹಲಿಯ ಮೈ ನವಿರೇಳುತ್ತದೆ.
ದಿವಾನ-ಇ-ಆಮ್(ಸಾರ್ವಜನಿಕ ಸಭಾಂಗಣ)ನಲ್ಲಿ ಸೇರಿದ ಜನ ಮೆಲ್ಲಗೆ ಪಿಸುಗುಡುತ್ತಾರೆ.
ಕೆಂಪುಕೋಟೆ
ಅದರ ಸುತ್ತ ಹಬ್ಬಿದ ಕಮಾನುಗಳಲ್ಲಿ ಕಾಮನಬಿಲ್ಲಿನ ಏಳು ಬಣ್ಣಗಳು ಪ್ರತಿಫಲಿಸುತ್ತವೆ. ರಂಗಮಹಲಿನಲ್ಲಿ ಸದಾ ಹರಿಯುವ ನೀರಿನ ಜುಳುಜಳು ನಿನಾದ. ತನ್ನ ನಡಿಗೆಗೆ ತಾನೇ ಬೇಸತ್ತ ಸಲಿಲ ಮಂದಗತಿ ತ್ಯಜಿಸಿ ಥಟ್ಟನೆ ಕಾರಂಜಿಯಾಗಿ ಚಿಮ್ಮುವ ಉತ್ಸಾಹ.
ಈ ನಡುವೆ ಜನರೆಲ್ಲಿ? ನಾವೆಲ್ಲಿ? ಕೋಟೆಯ ತುಂಬಾ ಕಂಡರೂ ಕಾಣದಂತಿರುವ ಅಡಗುತಾಣಗಳು. ಅವು ಜನಸಂದಣಿಯಿಂದ ಬೇಸತ್ತವರ ಮನ ಮನೆಗಳು. ಜೊತೆಗೆ ಚಿಕ್ಕೆ ತುಂಬಿದ ಆಕಾಶ ನೋಡುತ್ತಾ ತಣ್ಣಗೆ ನಿದ್ರಿಸಬಹುದಾದ ಶಯನ ಗೃಹಗಳು.
ಕೆಂಪು ಕೋಟೆಯ ತುಂಬಾ ಅರಸನ ಕನಸುಗಳು. ಈಗ ಶಹಾಜಹಾನ ಇಲ್ಲಿಲ್ಲ. ನಾವೇ ಆತನ ಕನಸುಗಳ ವಾರೀಸುದಾರರು.
ಅವನ ಹಾಗೇ ನಾವೂ ಒಂದೂರಿನಿಂದ ಇನ್ನೊಂದೂರಿಗೆ ಬಂದಿದ್ದೇವೆ. ದೆಹಲಿ ತುಂಬಾ ಹಲವು ಬಣ್ಣದ ಕೋಟೆ ಕಟ್ಟಿಕೊಂಡಿದ್ದೇವೆ. ಕಲುಷಿತ ಯಮುನೆಯ ತಟದಲಿ ಬಣ್ಣಗಳೇ ಕಾಣದ ಕಾಮನ ಬಿಲ್ಲಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ.
ಈ ಅಂತರ್ಜಾಲದ ತುಂಬಾ ಕೆಂಪು ಕೋಟೆಯ ಪ್ರತಿಮೆಗಳು.
ಅನಿಯತಾಕಾರದ ಆಕೃತಿಗಳು, ಅಡಗುತಾಣಗಳು, ಮನದ ಮನೆಗಳು.
ಹೆಕ್ಕೋಣ ಮುತ್ತು.
ಉಳಿಯಲಿ ಸಾಗರ.