Monday, January 17, 2011

ದೆಹಲಿ ಕರ್ನಾಟಕ ಸಂಘದಲ್ಲಿ ಹೊಸ ಕಾರ್ಯಕಾರಿ ಸಮಿತಿ ಅಧಿಕಾರ ಸ್ವೀಕಾರ

ಜನವರಿ ಒಂಬತ್ತರಂದು ನಡೆದ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಗೆದ್ದ ಹೊಸ ಕಾರ್ಯಕಾರಿ ಸಮಿತಿಯು ಅಧಿಕಾರ ವಹಿಸಿಕೊಂಡಿದೆ.
ಹೊಸ ಸಮಿತಿಯಲ್ಲಿ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ, ಉಪಾಧ್ಯಕ್ಷ ಬಿ.ಕೆ. ಬಸವರಾಜ್ ಮತ್ತು ಉಷಾ ಭರತಾದ್ರಿ, ಕಾರ್ಯದರ್ಶಿ  ಸಿ.ಎಂ. ನಾಗರಾಜ್, ಜಂಟಿ ಕಾರ್ಯದರ್ಶಿ ಎನ್.ಆರ್.ಶ್ರೀನಾಥ್ ಮತ್ತು ರೇಣುಕಾ ನಿಡಗುಂದಿ ಮತ್ತು ಕೋಶಾಧಿಕಾರಿ ಕೆ.ಆರ್. ರಾಮಮೂರ್ತಿ ಅವರಿದ್ದಾರೆ. ಅಲ್ಲದೆ ಸಮಿತಿಯಲ್ಲಿ  ಅಂಜನಿ ಗೌಡ, ಎಸ್.ಸಿ. ಹೇಮಲತಾ, ಟಿ.ಎಂ. ಮೈಲಾರಪ್ಪ, ಪಿ.ಸಿ. ಶ್ರೀನಿವಾಸ, ಸಿ.ಆರ್. ಶ್ರೀನಿವಾಸ್, ಜಿ.ಬಿ. ಹೆಗಡಿ, ಆನಂದ ಮುರುಗೋಡ್, ಬಿ. ನಾರಾಯಣ ಅವರು ಸೇರಿ ಎಂಟು ಸದಸ್ಯರಿದ್ದಾರೆ.

ಸುಮಾರು ೩೭೦೦ ಅಜೀವ ಸದಸ್ಯರಿರುವ ದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಸುಮಾರು ೮೦೦ ಸದಸ್ಯರು ಮತದಾನ ಮಾಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿ ಎರಡು ಮತಗಳ ಅಂತರದಲ್ಲಿ ಡಾ. ಹೆಗಡೆಯವರು ವಿಜಯ ಗಳಿಸಿದರು. 
ಡಾ. ವೆಂಕಟಾಚಲ ಹೆಗಡೆ
ಸಿ.ಎಂ.ನಾಗರಾಜ
(ಕೆಂಪು ಕೋಟೆ ವರದಿ)

No comments:

Post a Comment