Friday, December 21, 2012

ಎಚ್. ಎಸ್. ಶಿವಪ್ರಕಾಶ್ ಅವರ ಕವನ ಸಂಕಲನ ’ಮಬ್ಬಿನ ಹಾಗೆ ಕಣಿವೆಯಾಸಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ಕನ್ನಡದ ಹೆಸರಾಂತ ಕವಿ ನಾಟಕಕಾರ ಚಿಂತಕ ಎಚ್.ಎಸ್.ಶಿವಪ್ರಕಾಶ್ ಅವರ 'ಮಬ್ಬಿನ ಹಾಗೆ ಕಣಿವೆಯಾಸೆ' ಕಾವ್ಯ ಕೃತಿಗೆ 2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಎಚ್.ಎಸ್.ಶಿವಪ್ರಕಾಶ್

ಈ ಬಾರಿ ಅಕಾಡೆಮಿಯ ಪ್ರಶಸ್ತಿ ಗಳಿಸಿರುವ ಕೃತಿಗಳ ಪೈಕಿ ಹನ್ನೆರಡು ಕಾವ್ಯ ಕೃತಿಗಳು, ಆರು ಸಣ್ಣ ಕಥಾ ಸಂಕಲನಗಳು, ನಾಲ್ಕು ಕಾದಂಬರಿಗಳು, ಒಂದು ಆತ್ಮಕತೆ, ಒಂದು ವಿಮರ್ಶನಾ ಕೃತಿ ಸೇರಿದೆ. 2008ರ ಜನವರಿ ಮತ್ತು 2010ರ ಡಿಸೆಂಬರ್ 31ರ ಮೂರು ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರಕಟವಾದ ಕತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
ತಾಮ್ರಪತ್ರ, ಶಾಲು ಹಾಗೂ ಒಂದು ಲಕ್ಷ ರುಪಾಯಿ ಮೊತ್ತದ ಚೆಕ್‌ನ್ನು ಒಳಗೊಂಡ ಪ್ರಶಸ್ತಿಗಳನ್ನು ಮುಂಬರುವ ಫೆಬ್ರವರಿ 18ರಂದು ಇಲ್ಲಿ ನಡೆಯಲಿರುವ ಸಾಹಿತ್ಯಅಕಾಡೆಮಿಯ ಅಕ್ಷರ ಹಬ್ಬದ ಸಂದರ್ಭದಲ್ಲಿ ನೀಡಲಾಗುವುದು.
ಇದೇ ಸಾಲಿನ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಗಳಿಸಿರುವ ಕನ್ನಡದ ಮತ್ತೊಂದು ಕವಿತಾ ಸಂಗ್ರಹ ಆರಿಫ್ ರಾಜಾ ಅವರ 'ಜಂಗಮ ಫಕೀರನ ಜೋಳಿಗೆ' ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಮಲೆಯಾಳಂ ಕಾದಂಬರಿ 'ಕಯರ್'ನ ಕನ್ನಡ ಅನುವಾದ 'ಹಗ್ಗ' ಕತಿ 2012ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪಾತ್ರವಾಗಿದೆ.

No comments:

Post a Comment