Monday, December 31, 2012



Thank you all readers.
Updation in this Blog is suspended.

May go through old postings.

Hope to Come Back soon.

31st December 2012




Sunday, December 23, 2012

Literature develops compassion


New Delhi, Dec 23 (ANI): Noted Kannada poet and former member of the Central Sahitya Akademi Council Dr. Siddhalinga Pattanashetty has said literature, particularly poetry, has immense power to develop compassion and cordial relationship among people.
He was addressing a literary evening and felicitation programme in honor of Y.Avanindranath Rao, which was organized by the Delhi Karnataka Sangha.
A poet can only see the motherhood in every woman, he explained. His wife and noted poet Dr.Hema Pattanashetty said women had greater viability than men. The literary couple also recited their poems.
Avanindranath Rao who had awarded a doctorate for the study of Central Ministerial Libraries from Mahatma Gandhi Chitrakoot Gramoday Vishwavidyalaya (MGCGV), Madhya Pradesh, was felicitated by Dr.Pattanashetty.
Receiving the honor Dr. Rao, a Central Secretariat Library officer, said the determination was the key to his success.
Former Principal Information Officer and Media Adviser to the Prime Minister of India I.Ramamohan Rao and renowned scholar and Director of American Institute of Indian studies Dr. Purushottama Bilimale spoke on the occasion.
The president of the Delhi Karnataka Sangha, Dr.Venkatachala Hegde, and members of the committee, were also present on the occasion. (ANI)

Saturday, December 22, 2012

ಪಟ್ಟಣಶೆಟ್ಟಿ ಸಾಹಿತಿ ದಂಪತಿಗಳು ದೆಹಲಿಯಲ್ಲಿ

ಡಾ. ಹೇಮಾ ಪಟ್ಟಣಶೆಟ್ಟಿ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ ಸಾಹಿತಿ ದಂಪತಿಗಳು ದೆಹಲಿ ಕರ್ನಾಟಕ ಸಂಘ ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ಬದುಕು, ಸಾಹಿತ್ಯ, ಜೀವನ ಧೋರಣೆಗಳ ಕುರಿತು ಸಾಹಿತ್ಯಾಸಕ್ತರಲ್ಲಿ ಮಾತಾಡಿದರು. ಸಂಘದ ಸಾಹಿತ್ಯ ಉಪಸಮಿತಿಯ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ರೇಣುಕಾ ನಿಡಗುಂದಿ ಅವರು ಈ ಕಾರ್ಯಕ್ರಮವನ್ನು ನಡೆಸಿ ಕೆಲ ಸಮಯ ದೆಹಲಿಯ ತಣ್ಣನೆಯ ಚಳಿಯಲ್ಲಿ ಸಾಹಿತಿಗಳಿಬ್ಬರ ಅನುಭವದ ರಸಾನುಭವ  ದೊರೆಯುವಂತೆ ಮಾಡಿದರು.








ಎಲ್ಲಾ ಚಿತ್ರಗಳು ಬಾನಾಡಿ

Friday, December 21, 2012

ಎಚ್. ಎಸ್. ಶಿವಪ್ರಕಾಶ್ ಅವರ ಕವನ ಸಂಕಲನ ’ಮಬ್ಬಿನ ಹಾಗೆ ಕಣಿವೆಯಾಸಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ಕನ್ನಡದ ಹೆಸರಾಂತ ಕವಿ ನಾಟಕಕಾರ ಚಿಂತಕ ಎಚ್.ಎಸ್.ಶಿವಪ್ರಕಾಶ್ ಅವರ 'ಮಬ್ಬಿನ ಹಾಗೆ ಕಣಿವೆಯಾಸೆ' ಕಾವ್ಯ ಕೃತಿಗೆ 2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಎಚ್.ಎಸ್.ಶಿವಪ್ರಕಾಶ್

ಈ ಬಾರಿ ಅಕಾಡೆಮಿಯ ಪ್ರಶಸ್ತಿ ಗಳಿಸಿರುವ ಕೃತಿಗಳ ಪೈಕಿ ಹನ್ನೆರಡು ಕಾವ್ಯ ಕೃತಿಗಳು, ಆರು ಸಣ್ಣ ಕಥಾ ಸಂಕಲನಗಳು, ನಾಲ್ಕು ಕಾದಂಬರಿಗಳು, ಒಂದು ಆತ್ಮಕತೆ, ಒಂದು ವಿಮರ್ಶನಾ ಕೃತಿ ಸೇರಿದೆ. 2008ರ ಜನವರಿ ಮತ್ತು 2010ರ ಡಿಸೆಂಬರ್ 31ರ ಮೂರು ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರಕಟವಾದ ಕತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
ತಾಮ್ರಪತ್ರ, ಶಾಲು ಹಾಗೂ ಒಂದು ಲಕ್ಷ ರುಪಾಯಿ ಮೊತ್ತದ ಚೆಕ್‌ನ್ನು ಒಳಗೊಂಡ ಪ್ರಶಸ್ತಿಗಳನ್ನು ಮುಂಬರುವ ಫೆಬ್ರವರಿ 18ರಂದು ಇಲ್ಲಿ ನಡೆಯಲಿರುವ ಸಾಹಿತ್ಯಅಕಾಡೆಮಿಯ ಅಕ್ಷರ ಹಬ್ಬದ ಸಂದರ್ಭದಲ್ಲಿ ನೀಡಲಾಗುವುದು.
ಇದೇ ಸಾಲಿನ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವನ್ನು ಗಳಿಸಿರುವ ಕನ್ನಡದ ಮತ್ತೊಂದು ಕವಿತಾ ಸಂಗ್ರಹ ಆರಿಫ್ ರಾಜಾ ಅವರ 'ಜಂಗಮ ಫಕೀರನ ಜೋಳಿಗೆ' ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಮಲೆಯಾಳಂ ಕಾದಂಬರಿ 'ಕಯರ್'ನ ಕನ್ನಡ ಅನುವಾದ 'ಹಗ್ಗ' ಕತಿ 2012ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪಾತ್ರವಾಗಿದೆ.

Friday, December 14, 2012

ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲು ಸಂಸದರ ವಿಶೇಷ ಸಭೆ


ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರಿಸುವ ಕುರಿತು ರಾಜಧಾನಿ ದೆಹಲಿಯಲ್ಲಿ ಮುಂದಿನ ಫೆಬ್ರವರಿ ತಿಂಗಳ ೨೪ರಂದು ಆಯೋಜಿಸಲು ಉದ್ದೇಶಿಸಲಾದ ಜಾಗತಿಕ ಮಟ್ಟದ ದೆಹಲಿ ತುಳುಸಿರಿ-೨೦೧೩ರ ಪೂರ್ವಭಾವಿಯಾಗಿ ರಾಜ್ಯಸಭಾ ಸದಸ್ಯ ಶ್ರೀ ಆಸ್ಕರ್ ಫೆರ್ನಾಂಡೀಸ್ ನೇತೃತ್ವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರ ಹಾಗೂ ಸಂಸದರೊಂದಿಗೆ ವಿಶೇಷ ಬೆಳಗ್ಗಿನ ಉಪಾಹಾರ ಮತ್ತು ಸಭೆ ನಡೆಯಿತು.  ಈ ಮೂಲಕ ಮುಂದಿನ ಸಮಾವೇಶಕ್ಕೆ ವಿಶೇಷ ಚಾಲನೆ ದೊರಕಿದಂತಾಗಿದೆ. ಈ ಸಂದರ್ಭದಲ್ಲಿ ಸಂಸದರನ್ನು ಉದ್ದೇಶಿಸಿ ಮಾತಾಡಿದ ಶ್ರೀ ಆಸ್ಕರ್ ಫರ್ನಾಂಡಿಸ್ ಅವರು,  ತುಳು ಭಾಷೆ ಮತ್ತು ಸಂಸ್ಕೃತಿ ಅತಿ ವಿಶಿಷ್ಟ ಮತ್ತು ಅನನ್ಯ, ತುಳುಜನರ ಆಚರಣೆಗಳು ವಿಶಿಷ್ಟವಾಗಿದ್ದು ಅವುಗಳು ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿವೆ. ಅದೇರೀತಿ ತುಳುವಿನ ಭಾಷಾ ಸಂಪತ್ತು ಅತ್ಯಂತ ಹೇರಳವಾಗಿದ್ದು ಅದನ್ನು ಸೂಕ್ತ ರೀತಿಯಲ್ಲಿ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ, ಕಾರಣ ತುಳುವಿಗೆ ಸಂವಿಧಾನದ ಮಾನ್ಯತೆ ಅಗತ್ಯವಾಗಿದ್ದು ಅದು ಸಾಧ್ಯವಾಗಲು ಎಲ್ಲ ಸಂಸದರೂ ಸಹಕರಿಸಬೇಕಾಗಿದೆ. ಎಂದು ಕೋರಿಕೊಂಡರು.

ತುಳುವನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ಅಗತ್ಯದ ಕುರಿತು ವಿವರ ನೀಡಿದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ ಅವರು’ ಭಾರತದ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಆರಂಭದಲ್ಲಿ ೧೪ ಭಾಷೆಗಳಷ್ಟೇ ಇದ್ದುವು. ಯಾವುದೋ ರಾಜ್ಯದ ಅಧಿಕೃತ ಭಾಷೆಯಾಗದ ಹೊರತು ೮ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವಂತಿರಲಿಲ್ಲ. ಆದರೆ ೨೦೦೩ ರಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತಂದು ಡೋಗ್ರಿ, ಮೈಥಿಲಿ, ಸಂತಾಲಿ ಮತ್ತು ಬೋಡೋ  ಭಾಷೆಗಳನ್ನು ಸೇರಿಸಲಾಯಿತು. ತುಳು ಈ ಭಾಷೆಗಳಷ್ಟೇ ಶ್ರೀಮಂತವಾದುದು, ಮತ್ತು ೫೦ ಲಕ್ಷಕ್ಕೂ ಮಿಕ್ಕು ಜನ ಅದನ್ನು ಆಡುವುದರಿಂದ ಅರ್ಹತೆಯ ದೃಷ್ಟಿಯಿಂದ ಅದರಲ್ಲಿ ಕೊರತೆಯೇನೂ ಇಲ್ಲ. ಜನಪ್ರತಿನಿಧಿಗಳು ಒತ್ತಡ ಹಾಕಿ ಈ ಕೆಲಸ ಆಗುವಂತೆ ಮಾಡಿ ಭಾಷಾ ಸಂರಕ್ಷಣೆಯ ವಿಷಯದಲ್ಲಿ ಇತರರಿಗೆ ಮೇಲ್ಪಂಕ್ತಿಯಾಗಬೇಕು’ ಎಂದರು.

ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದ ತುಳುಸಿರಿ ಸಮಾವೇಶದ ಸಂಚಾಲಕ ವಸಂತ ಶೆಟ್ಟಿ ಬೆಳ್ಳಾರೆ ಅವರು ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿ ಎಲ್ಲಾ ಕನ್ನಡದ ಜನಪ್ರತಿನಿಧಿಗಳು ಈ ಬಾರಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ಬಗ್ಗೆ ಸಂಸತ್ತಿನಲ್ಲಿ ಒತ್ತಡ ಹೇರುವಂತೆ ಕರೆ ಇತ್ತರು.

ಸಭೆಯಲ್ಲಿ ಕೇಂದ್ರ ಮಂತ್ರಿಗಳಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀ ಎಂ. ವೀರಪ್ಪ ಮೊಯಿಲಿ ಸಂಸದರಾದ ಶ್ರೀ ರಮೇಶ ಜಿಗಜಿಣಗಿ, ಶ್ರೀ ಪಿ.ಸಿ.ಗದ್ದಿಗೌಡರ್, ಶ್ರೀ ಬಸವರಾಜ ಸೇಡಂ, ಶ್ರೀ ಜಯಪ್ರಕಾಶ್ ಹೆಗಡೆ, ಶ್ರೀ ಎಚ್.ವಿಶ್ವನಾಥ್, ಶ್ರೀ ಆಸ್ಕರ್ ಫೆರ್ನಾಂಡೀಸ್, ಶ್ರೀ ಜೆ.ರಾಮಕೃಷ್ಣ,  ಶ್ರೀ ಶಿವರಾಮೇ ಗೌಡ, ಶ್ರೀ ಅನಿಲ್ ಲಾಡ್, ಶ್ರೀ ಪಿ.ಸಿ.ಮೋಹನ್, ಶ್ರೀ ಶಿವಕುಮಾರ್ ಉದಾಸಿ, ಕರ್ನಾಟಕ ಸರ್ಕಾರದ ವಿಶೇಷ ಸಮನ್ವಯಾಧಿಕಾರಿ ಶ್ರೀ ಬೈಕೆರೆ ನಾಗೇಶ್,  ಮಾಜಿ ಸಂಸದ ಶ್ರೀ ಶಿವಣ್ಣ, ಮಾಜಿ ಸಚಿವ ಶ್ರೀ ಎಚ್.ಎಂ.ರೇವಣ್ಣ , ತುಳುಸಿರಿ ಸಮಾವೇಶ ಸಮಿತಿಯ ಅಧ್ಯಕ್ಷ ಶ್ರೀ ಐ.ರಾಮಮೋಹನ್ ರಾವ್ ಹಾಗೂ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತುಳುನಾಡಿನ ವಿಶಿಷ್ಟ ಗೋಳಿ ಬಜೆ, ನೀರುಳ್ಳಿ ಬಜೆ, ನೀರ್ ದೋಸೆ, ಕಡ್ಲೆ, ಸಜ್ಜಿಗೆ-ಬಜಿಲ್, ಮತ್ತಿತರ ತಿಂಡಿಗಳಿರುವ ಉಪಾಹಾರ ವ್ಯವಸ್ಥೆಯನ್ನು ಮಾಡಿ ತುಳುಸಂಸ್ಕೃತಿಯ ವಿಶಿಷ್ಟತೆಯನ್ನು ಪ್ರತೀತಗೊಳಿಸಲು ಪ್ರಯತ್ನಿಸಲಾಗಿತ್ತು.

ಅವನೀಂದ್ರನಾಥ ರಾವ್

Monday, December 10, 2012

Modern Theatre Festival


Modern Theatre Festival


Sahitya Kala Parishad, Delhi presents annual theatre festival featuring, Monday through Friday respectively: Premchand’s “Rangbhoomi” (dir. Surendra Sharma), Tagore’s “Jeevito Mrito” (dir. Anuradha Kapoor), Satish Aalker’s “Mathh Ke Raaste Mein Ek Din” (dir. Suresh Bhardawaj), Parvej Ahmed’s “Bol ke Lab Azad Han Tere” (dir. Lokendra Trivedi) ; “Shaayar… Shutter Down” (writing and dir. Tripurari Sharma)
Venue : Shri Ram Centre
Address : 4, Safdar Hasmi Marg, Mandi House, New Delhi
Date : December 10-14
Time : 6.30 p.m.