Friday, February 4, 2011

ಇಸ್ಮಾಯಿಲ್ ಬುಡಂದಿ ಅವರಿಗೆ ಕನ್ನಡ ಶ್ರೀ ರಾಷ್ಟ್ರೀಯ ಪ್ರಶಸ್ತಿ

ಇಸ್ಮಾಯಿಲ್ ಬುಡಂದಿ
ಕರ್ನಾಟಕ ರಾಜ್ಯ ಕನ್ನಡ ಸೇನೆಯು ಮೆಹರೋಲಿ ಕನ್ನಡ ಸಂಘ, ನವದೆಹಲಿಯ ಅಧ್ಯಕ್ಷ ಇಸ್ಮಾಯಿಲ್ ಬುಡಂದಿ ಅವರಿಗೆ  ಕನ್ನಡ ಶ್ರೀ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ. 
ಪ್ರಶಸ್ತಿ ಪ್ರದಾನ
ಮೈಸೂರಿನ ಪುರಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಪ್ರಶಸ್ತಿಯನ್ನು ಬುಡಂದಿ ಅವರಿಗೆ ನೀಡಲಾಯಿತು. 
ಐಬಾ ಟೆಕ್ಸ್ ಸಂಸ್ಥೆಯ ಮಾಲೀಕರಾದ ಬುಡಂದಿಯವರು ಅಖಿಲ ಭಾರತ ಟೆಕ್ಸ್ ಟೈಲ್ಸ್ ಅಸೋಸಿಯೇಶನ್ ನ ದೆಹಲಿ ಘಟಕದ ಖಜಾಂಚಿಯೂ ಆಗಿದ್ದಾರೆ.
ಅಲ್ಪ ಸಂಖ್ಯಾತರ ಗ್ರಾಮೀಣ ಚಿಕಿತ್ಸಾ ಸಂಸ್ಥೆಯ ಕಾರ್ಯಾಧ್ಯಕ್ಷ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಜೀವ ಸದಸ್ಯರಾಗಿರುವ ಇವರು ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ನಲ್ಲೂ ಸಕ್ರಿಯರಾಗಿದ್ದರು.
ಅವರು ದೆಹಲಿಯಲ್ಲಿ ರಾಷ್ಟ್ರೀಯ ನೃಪತುಂಗ ಕಲಾ ಉತ್ಸವವನ್ನು ಬಹಳ ಬಿಜೃಂಭಣೆಯಿಂದ ಯಶಸ್ವಿಯಾಗಿ ನಡೆಸಿದ್ದಾರೆ.

1 comment:

  1. Hearty congratulations to Sri Ismail Budundiji. He richly deserves this award. I wish him many more such awards. He has made Delhi Kannadigas fell proud.


    KM Kalumangi

    ReplyDelete